Tuesday, July 26, 2022

ನಗರಸಭೆ ಮಾಜಿ ಉಪಾಧ್ಯಕ್ಷೆ ಕೆ.ಬಿ ಶ್ರೀಲಕ್ಷ್ಮಿಗೆ ಪುತ್ರ ವಿಯೋಗ

ಬಿ.ಕೆ ಅನಿಲ್‌ಕುಮಾರ್  
ಭದ್ರಾವತಿ, ಜು. ೨೬ : ನಗರಸಭೆ ಮಾಜಿ ಉಪಾಧ್ಯಕ್ಷೆ ಕೆ.ಬಿ ಶ್ರೀಲಕ್ಷ್ಮಿ ಅವರ ಪುತ್ರ ಬೊಮ್ಮನಕಟ್ಟೆ ನಿವಾಸಿ ಬಿ.ಕೆ ಅನಿಲ್‌ಕುಮಾರ್(೫೧) ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.
ಎಂಪಿಎಂ ಕಾರ್ಮಿಕ ಮುಖಂಡ, ತಂದೆ ಬಿ.ಎನ್ ಕೃಷ್ಣಮೂರ್ತಿ, ತಾಯಿ ಕೆ.ಬಿ ಶ್ರೀಲಕ್ಷ್ಮಿ, ಪತ್ನಿ, ಇಬ್ಬರು ಪುತ್ರಿಯರು ಇದ್ದರು. ಮೃತರ ನಿಧನಕ್ಕೆ ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸದಸ್ಯ ಬಿ.ಕೆ ಮೋಹನ್, ಮಾಜಿ ಸದಸ್ಯರಾದ ವೆಂಕಟಯ್ಯ, ರಾಜು, ಪುಟ್ಟೇಗೌಡ, ಕುರುಹಿನಶೆಟ್ಟಿ ಸಮಾಜ, ದೇವಾಂಗ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.


No comments:

Post a Comment