Thursday, August 18, 2022

ಮನೆಗಳ್ಳತನ ಓರ್ವನ ಸೆರೆ : ನಗದು, ಚಿನ್ನಾಭರಣ ವಶ

ಮನೆಯ ಬೀಗ ತೆಗೆದು ನಗದು, ಚಿನ್ನಾಭರಣ ಕಳ್ಳತನ ಮಾಡಿದ್ದ ಓರ್ವ ಮನೆಗಳ್ಳನನ್ನು ಭದ್ರಾವತಿ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿರುವ ಘಟನೆ ಗುರುವಾರ ನಡೆದಿದೆ.
    ಭದ್ರಾವತಿ, ಆ.೧೮: ಮನೆಯ ಬೀಗ ತೆಗೆದು ನಗದು, ಚಿನ್ನಾಭರಣ ಕಳ್ಳತನ ಮಾಡಿದ್ದ ಓರ್ವ ಮನೆಗಳ್ಳನನ್ನು ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿರುವ ಘಟನೆ ಗುರುವಾರ ನಡೆದಿದೆ.
    ಹೊಸಮನೆ ೩ನೇ ತಿರುವಿನ ನಿವಾಸಿ ವಸಂತರಾಜು(೩೭) ಬಂಧಿತನಾಗಿದ್ದು, ಈತನಿಂದ ಒಟ್ಟು ೫,೮೯,೫೦೦ ರು. ಮೌಲ್ಯದ ಒಟ್ಟು ೧೩೧ ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
    ಈತ ಜ.೧೧, ೨೦೨೧ರಂದು ಹಳೇನಗರದ ಭೂತನಗುಡಿಯಲ್ಲಿ ಮನೆಯೊಂದರಲ್ಲಿ ಮನೆಯವರು ಮನೆಗೆ ಬೀಗ ಹಾಕಿ ತುಳಿಸಿ ಕಟ್ಟೆ ಹತ್ತಿರ ಬೀಗದ ಕೈ ಇಟ್ಟು ಹೊರ ಹೋಗಿದ್ದು, ಈ ಸಂದರ್ಭದಲ್ಲಿ ಮನೆಯ ಬೀಗ ತೆಗೆದು ಬೀರುವಿನಲ್ಲಿದ್ದ ನಗದು ಹಾಗು ಚಿನ್ನಾಭರಣ ಮತ್ತು ಮೊಬೈಲ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಈ ಸಂಬಂಧ ಪ್ರಕರಣ ದಾಖಲಾಗಿತ್ತು.
    ನಗರ ಪೊಲೀಸ್ ವೃತ್ತ ನಿರೀಕ್ಷಕರು, ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣಾಧಿಕಾರಿ ಹಾಗು ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಲಾಗಿತ್ತು. ತಂಡ ಈತನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಈತನ ವಿರುದ್ಧ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಮತ್ತು ಹಳೇನಗರ ಪೊಲೀಸ್ ಠಾಣೆಯಲ್ಲಿ ತಲಾ ಒಂದೊಂದು ಮನೆಗಳ್ಳತನ ಪ್ರಕರಣಗಳು ದಾಖಲಾಗಿವೆ .

No comments:

Post a Comment