Sunday, August 21, 2022

ಅದ್ದೂರಿಯಾಗಿ ಜರುಗಿದ ಓಂ ಶಕ್ತಿ ಉತ್ಸವ ಮೆರವಣಿಗೆ

ಭದ್ರಾವತಿ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಸಮೀಪದ ಅಂಬೇಡ್ಕರ್ ನಗರದಲ್ಲಿರುವ ಓಂ ಶಕ್ತಿ ದೇವಸ್ಥಾನದಲ್ಲಿ ಭಾನುವಾರ ಉತ್ಸವ ಮೆರವಣಿಗೆ ನಡೆಯಿತು.
    ಭದ್ರಾವತಿ, ಆ. ೨೧: ನಗರದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಸಮೀಪದ ಅಂಬೇಡ್ಕರ್ ನಗರದಲ್ಲಿರುವ ಓಂ ಶಕ್ತಿ ದೇವಸ್ಥಾನದಲ್ಲಿ ಭಾನುವಾರ ಉತ್ಸವ ಮೆರವಣಿಗೆ ನಡೆಯಿತು.
    ಬಿ.ಎಚ್ ರಸ್ತೆಯಲ್ಲಿ ಓಂ ಶಕ್ತಿ ಉತ್ಸವ ಮೂರ್ತಿಯೊಂದಿಗೆ ಕಲಾ ತಂಡಗಳು ಹಾಗು ಹರಕೆಯೊತ್ತ ಭಕ್ತರು ಕೆಂಡ ತುಂಬಿದ ಮಡಕೆಯೊಂದಿಗೆ ಸಾಗಿದರು. ಕೊನೆಯಲ್ಲಿ ಕೆಂಡಾರ್ಪಣೆಯೊಂದಿಗೆ ಅಂತ್ಯಗೊಳಿಸಲಾಯಿತು.


    ಓಂ ಶಕ್ತಿ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು ಜರುಗಿದವು. ನಗರದ ವಿವಿಧೆಡೆಗಳಿಂದ ಭಕ್ತರು ಆಗಮಿಸಿದ್ದರು. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಜರುಗಿದವು.  

No comments:

Post a Comment