Thursday, August 4, 2022

ಅರ್ಧ ತಾಸು ಸುರಿದ ಬಾರಿ ಮಳೆಗೆ : ತಗ್ಗು ಪ್ರದೇಶಗಳು ಜಲಾವೃತ

ಬಿಳಿಕಿ ವೃತ್ತದಲ್ಲಿ ಮಂಡಿವರೆಗೂ ನೀರು : ವಾಹನ ಸವಾರರ ಪರದಾಟ

ಭದ್ರಾವತಿ ಬಿಳಿಕಿ ವೃತ್ತದಲ್ಲಿ ಗುರುವಾರ ಸಂಜೆ ಸುರಿದ ಬಾರಿ ಮಳೆಯಿಂದಾಗಿ ರಸ್ತೆ ಮೇಲೆ ಮಂಡಿವರೆಗೂ ನೀರು ನಿಂತುಕೊಂಡಿರುವುದು.
ಭದ್ರಾವತಿ, ಆ. ೪: ನಗರದಲ್ಲಿ ಗುರುವಾರ ಸಂಜೆ ಏಕಾಏಕಿ ಸುಮಾರು ಅರ್ಧ ತಾಸುಗಳಿಗೂ ಹೆಚ್ಚು ಸಮಯ ಸುರಿದ ಬಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿರುವ ಘಟನೆಗಳು ನಡೆದಿವೆ.
ಕೆಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡು ಕೆಲ ಸಮಯ ಕೆರೆಯಂತೆ ಕಂಡು ಬಂದಿದ್ದು, ಮಳೆ ನಿಂತ ನಂತರ ನೀರಿನ ಮಟ್ಟ ಸಹ ಇಳಿಮುಖಗೊಂಡಿದೆ.
ನಗರಸಭೆ ವ್ಯಾಪ್ತಿಯ ಕೆಲವು ವಾರ್ಡ್‌ಗಳಲ್ಲಿ  ಚರಂಡಿಗಳಲ್ಲಿ ನೀರು ನಿಂತು ಕೊಂಡು ರಸ್ತೆ ಮೇಲೆ ಹರಿಯುತ್ತಿರುವುದು ಕಂಡು ಬಂದಿತು.
ಬಿಳಿಕಿ ವೃತ್ತದಲ್ಲಿ ರಸ್ತೆಯ ಎರಡು ಬದಿಯಲ್ಲೂ ಕಾಲುವೆಗಳು ಹರಿದು ಹೋಗಿದ್ದು, ಕಾಲುವೆ ನೀರಿನೊಂದಿಗೆ ಮಳೆ ನೀರು ಸೇರಿಕೊಂಡು  ರಸ್ತೆಯಲ್ಲಿ  ಮಂಡಿವರೆಗೂ ನಿಂತುಕೊಂಡಿದ್ದು, ಇದರಿಂದಾಗಿ ವಾಹನ ಸವಾರರು ಪರಾದಾಡುವಂತಾಯಿತು. ಇದೆ ರೀತಿ ಹಲವೆಡೆ ಮಳೆ ನೀರಿನಿಂದ ಸಮಸ್ಯೆ ಎದುರಾಗಿರುವುದು ಕಂಡು ಬಂದಿತು.    


ಭದ್ರಾವತಿ ಬಿಳಿಕಿ ವೃತ್ತದಲ್ಲಿ ಗುರುವಾರ ಸಂಜೆ ಸುರಿದ ಬಾರಿ ಮಳೆಯಿಂದಾಗಿ ರಸ್ತೆ ಮೇಲೆ ಮಂಡಿವರೆಗೂ ನೀರು ನಿಂತುಕೊಂಡಿದ್ದು, ಮುಂದೆ ಸಂಚರಿಸಲು ಸಾಧ್ಯವಾಗದೆ ಸಾಲುಗಟ್ಟಿ ನಿಂತಿರುವ ವಾಹನಗಳು.

No comments:

Post a Comment