Sunday, September 25, 2022

ರ‍್ಯಾಮ್ಕೋಸ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ : ಅಭಿನಂದನೆ

ಭದ್ರಾವತಿಯಲ್ಲಿ ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾನುವಾರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಸೆ. ೨೫ : ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾನುವಾರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಸಂಘದ ಅಧ್ಯಕ್ಷ ಸಿ. ಮಲ್ಲೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಕಾರ್ಯನಿರ್ವಾಹಕ ಎಂ. ವಿರುಪಾಕ್ಷಪ್ಪ, ಪ್ರಸಕ್ತ ಸಾಲಿನ ವರ್ಷಾಂತ್ಯಕ್ಕೆ ೧೮೯ ಲಕ್ಷ ಷೇರುಧನ, ೩೬೬೩ ಸದಸ್ಯರನ್ನು ಸಂಘ ಹೊಂದಿದೆ. ೧೪೪ ಲಕ್ಷ ಆಪದ್ಧನನಿಧಿ ಹೊಂದಿದ್ದು, ಸುಮಾರು ೨೭ ಕೋ. ರು. ವಿವಿಧ ಠೇವಣಿಗಳನ್ನು ಒಳಗೊಂಡಿದೆ.  ೯೨೭೭ ಕ್ವಿಂಟಾಲ್(೧೩೨೫೩ ಚೀಲ)  ರು. ೪೩ ಕೋ. ಅಡಕೆ ವಹಿವಾಟು ನಡೆಸಿದ್ದು, ದಲ್ಲಾಳಿ ರು. ೫೩.೬೦ ಲಕ್ಷ ಗಳಿಸಿದೆ. ಸಂಘದ ಎಲ್ಲಾ ಖರ್ಚುವೆಚ್ಚಗಳನ್ನು ಕಳೆದು ರು.೧೦೪.೫೪ ಲಕ್ಷ ನಿವ್ವಳ ಲಾಭ ಗಳಿಸಿದೆ. ಇದು ಸಂಘದ ೨೮ ವರ್ಷದಲ್ಲೇ ಅತ್ಯಂತ ಗರಿಷ್ಠ ಲಾಭವಾಗಿದೆ ಎಂದರು.
    ಉಪಾಧ್ಯಕ್ಷ ಎಚ್.ಟಿ ಉಮೇಶ್, ನಿರ್ದೇಶಕರಾದ ಜಿ.ಈ ಚನ್ನಪ್ಪ, ಯು. ಗಂಗನಗೌಡ, ಎಚ್.ಆರ್ ತಿಮ್ಮಪ್ಪ, ಸಿ. ಹನುಮಂತು, ಬಿ.ಜಿ ಜಗದೀಶ್‌ಗೌಡ, ಮಹೇಶ್, ಎಚ್.ಎಲ್ ಷಡಾಕ್ಷರಿ, ಎಂ.ಎಸ್ ಬಸವರಾಜಪ್ಪ, ಎಚ್.ಎಸ್ ಸಂಜೀವಕುಮಾರ್, ಎಸ್. ಮಹೇಶ್ವರಪ್ಪ, ಉಮಾ, ಲಲಿತಮ್ಮ ಸೇರಿದಮತೆ ಇನ್ನಿತರರು ಉಪರಿದ್ದರು. ನಿರ್ದೇಶಕ ಎಂ. ಪರಮೇಶ್ವರಪ್ಪ ಸ್ವಾಗತಿಸಿದರು.

No comments:

Post a Comment