Saturday, September 10, 2022

ಗಮನ ಸೆಳೆಯುತ್ತಿದೆ ಅಯೋಧ್ಯೆ ಶ್ರೀರಾಮನನ್ನು ಹೋಲುವ ವಿನಾಯಕ ಮೂರ್ತಿ

ಸರ್.ಎಂ ವಿಶ್ವೇಶ್ವರಾಯ ಕನ್ನಡ ಯುವಕರ ಸಂಘದಿಂದ ಪ್ರತಿಷ್ಠಾಪನೆ, ಸೆ.೧೧ರಂದು ವಿಸರ್ಜನೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಹುತ್ತಾಕಾಲೋನಿ, ಜಿಂಕ್‌ಲೈನ್ ಮತ್ತು ಅಪ್ಟೈರ‍್ಸ್ ಬಿಲ್ಡಿಂಗ್ ಒಳಗೊಂಡ ಪ್ರಮುಖ ವೃತ್ತದಲ್ಲಿ ಈ ಬಾರಿ ಅಯೋಧ್ಯೆ ಶ್ರೀರಾಮನನ್ನು ಹೋಲುವ ವಿಶಿಷ್ಟ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಗಣಹೋಮ, ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು.
    ಭದ್ರಾವತಿ, ಸೆ. ೧೦: ನಗರಸಭೆ ವ್ಯಾಪ್ತಿಯ ಹುತ್ತಾಕಾಲೋನಿ, ಜಿಂಕ್‌ಲೈನ್ ಮತ್ತು ಅಪ್ಟೈರ‍್ಸ್ ಬಿಲ್ಡಿಂಗ್ ಒಳಗೊಂಡ ಪ್ರಮುಖ ವೃತ್ತದಲ್ಲಿ ಈ ಬಾರಿ ಅಯೋಧ್ಯೆ ಶ್ರೀರಾಮನನ್ನು ಹೋಲುವ ವಿಶಿಷ್ಟ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಈ ವಿನಾಯಕ ಮೂರ್ತಿ ವಿಸರ್ಜನೆ ಸೆ.೧೧ರ ಭಾನುವಾರ ಸಂಜೆ ನಡೆಯಲಿದೆ.
    ಸರ್.ಎಂ ವಿಶ್ವೇಶ್ವರಾಯ ಕನ್ನಡ ಯುವಕರ ಸಂಘದ ವತಿಯಿಂದ ೭ನೇ ವರ್ಷದ ಅಂಗವಾಗಿ ಪ್ರತಿಷ್ಠಾಪಿಸಲಾಗಿರುವ ಸುಮಾರು ೬.೫ ಅಡಿ ಎತ್ತರವಿರುವ ಶ್ರೀ ವಿನಾಯಕ ಮೂರ್ತಿ ಬಿಲ್ಲು, ಬಾಣ ಹಿಡಿದ ಶ್ರೀರಾಮನನ್ನು ಹೋಲುತ್ತಿದ್ದು, ಭಕ್ತರನ್ನು ಆಕರ್ಷಿಸುತ್ತಿದೆ.
    ಕಡದಕಟ್ಟೆ ಪಾವರ್ತಿ ಶಾಮಿಯಾನ ಹಾಗು ಇನ್ನಿತರ ದಾನಿಗಳು, ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ೧೨ ದಿನಗಳ ಕಾಲ ವಿನಾಯಕ ಮೂರ್ತಿಯನ್ನು ವೈಶಾಕ್, ಚಂದ್ರಶೇಖರ್, ವಿನಾಯಕ, ಪ್ರಮೋದ್, ಸುರೇಶ್, ಪ್ರವೀಣ್ ಸೇರಿದಂತೆ ಇನ್ನಿತರರನ್ನೊಳಗೊಂಡ ಯುವಕರ ತಂಡ ಪ್ರತಿಷ್ಠಾಪಿಸುವಲ್ಲಿ ಯಶಸ್ವಿಯಾಗಿದೆ.


    ಪ್ರತಿಷ್ಠಾಪನೆ ಅಂಗವಾಗಿ ಸ್ವಾಮಿ ಮತ್ತು ದ್ವಾರಕನಾಥ ನೇತೃತ್ವದಲ್ಲಿ ಗಣಹೋಮ ಸೇರಿದಂತೆ ಧಾರ್ಮಿಕ ಆಚರಣೆಗಳು, ಮಹಿಳೆಯರಿಂದ ಕೀರ್ತನೆಗಳು, ಭಜನೆ ಹಾಗು ಸಾವಿರಾರು ಮಂದಿಗೆ ಅನ್ನಸಂತರ್ಪಣೆ ಸಹ ನೆರವೇರಿಸುವ ಮೂಲಕ ಯುವಕರ ತಂಡ ಗಮನ ಸೆಳೆದಿದೆ.
ಭಾನುವಾರ ಸಂಜೆ ೪ ಗಂಟೆಗೆ ಕಲಾತಂಡಗಳೊಂದಿಗೆ ವಿಸರ್ಜನಾ ಪೂರ್ವ ಮೆರವಣಿಗೆ ನಡೆಯಲಿದ್ದು, ರಾತ್ರಿ ವಿಶ್ವೇಶ್ವರಯ ನಗರದ ಬಳಿ ಭದ್ರಾ ಕಾಲುವೆಯಲ್ಲಿ ಮೂರ್ತಿ ವಿಸರ್ಜನೆಗೊಳ್ಳಲಿದೆ.


ಭದ್ರಾವತಿ ನಗರಸಭೆ ವ್ಯಾಪ್ತಿಯ ಹುತ್ತಾಕಾಲೋನಿ, ಜಿಂಕ್‌ಲೈನ್ ಮತ್ತು ಅಪ್ಟೈರ‍್ಸ್ ಬಿಲ್ಡಿಂಗ್ ಒಳಗೊಂಡ ಪ್ರಮುಖ ವೃತ್ತದಲ್ಲಿ ಈ ಬಾರಿ ಅಯೋಧ್ಯೆ ಶ್ರೀರಾಮನನ್ನು ಹೋಲುವ ವಿಶಿಷ್ಟ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.




No comments:

Post a Comment