Wednesday, October 5, 2022

ಆರ್.ಎಸ್ ಸಿಂಚನ ರಾಜ್ಯಮಟ್ಟಕ್ಕೆ ಆಯ್ಕೆ

ಶಿವಮೊಗ್ಗ ಜಿಲ್ಲಾ ಮಟ್ಟದ ೧೪ನೇ ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಭದ್ರಾವತಿ ಪೂರ್ಣಪ್ರಜ್ಞಾ ಶಾಲೆಯ ಆರ್.ಎಸ್ ಸಿಂಚನ ತಟ್ಟೆ ಎಸೆತದಲ್ಲಿ(ಡಿಸ್ಕಸ್) ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ತಮ್ಮದಾಗಿಸಿಕೊಂಡಿದ್ದಾರೆ. 
    ಭದ್ರಾವತಿ, ಅ. ೫: ಶಿವಮೊಗ್ಗ ಜಿಲ್ಲಾ ಮಟ್ಟದ ೧೪ನೇ ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಪೂರ್ಣಪ್ರಜ್ಞಾ ಶಾಲೆಯ ಆರ್.ಎಸ್ ಸಿಂಚನ ತಟ್ಟೆ ಎಸೆತದಲ್ಲಿ( ಡಿಸ್ಕಸ್)) ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ಜಿಲ್ಲಾಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಆರ್.ಎಸ್ ಸಿಂಚಿನ ಸಿದ್ದಾರೂಢನಗರದ ನಿವಾಸಿ, ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ)  ದಕ್ಷಿಣ ಪ್ರಾಂತ್ಯ ಉಪಾಧ್ಯಕ್ಷ ಹಾ. ರಾಮಪ್ಪನವರ ಮೊಮ್ಮಗಳಾಗಿದ್ದು, ಇವರ ತಂದೆ ಕೆ.ಆರ್ ಸತೀಶ್ ಹಾಗು ತಾಯಿ ಮತ್ತು ನಗರದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಅರ್.ಎಸ್ ಸಿಂಚನ ಅವರನ್ನು ಅಭಿನಂದಿಸಿದ್ದಾರೆ.

No comments:

Post a Comment