Sunday, October 16, 2022

ಶ್ರೀರಾಮರಾಜ್ಯ ಗಣಪತಿ : ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ

ಭದ್ರಾವತಿ ನಗರದ ಪ್ರಮುಖ ವಿನಾಯಕ ಸಂಘಟನೆಗಳಲ್ಲಿ ಒಂದಾಗಿರುವ ಜನ್ನಾಪುರ ಶ್ರೀರಾಮರಾಜ್ಯ ಸಂಘಟನೆ ವತಿಯಿಂದ ಈ ಬಾರಿ ಶ್ರೀ ವಿನಾಯಕ ಪ್ರತಿಷ್ಠಾಪಿಸಲಾಗಿದ್ದು, ಭಾನುವಾರ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ, ಅ. ೧೬ : ನಗರದ ಪ್ರಮುಖ ವಿನಾಯಕ ಸಂಘಟನೆಗಳಲ್ಲಿ ಒಂದಾಗಿರುವ ಜನ್ನಾಪುರ ಶ್ರೀರಾಮರಾಜ್ಯ ಸಂಘಟನೆ ವತಿಯಿಂದ ಈ ಬಾರಿ ಶ್ರೀ ವಿನಾಯಕ ಪ್ರತಿಷ್ಠಾಪಿಸಲಾಗಿದ್ದು, ಭಾನುವಾರ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
    ಸುಮಾರು ೫ ದಶಕಗಳಿಗೂ ಹೆಚ್ಚು ಕಾಲದಿಂದ ಶ್ರೀರಾಮರಾಜ್ಯ ಸಂಘಟನೆ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಮೂಲಕ ಈ ಭಾಗದಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಕಾಯ್ದುಕೊಂಡು ಬಂದಿದೆ.
    ಪ್ರತಿವರ್ಷ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಹಲವಾರು ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರುತ್ತಿದ್ದು, ಜನ್ನಾಪುರ, ಹುತ್ತಾಕಾಲೋನಿ, ವೇಲೂರು ಶೆಡ್, ವಿದ್ಯಾಮಂದಿರ, ನ್ಯೂಟೌನ್ ಸೇರಿದಂತೆ ಸುತ್ತಮುತ್ತಲ ಸಾವಿರಾರು ಭಕ್ತಾಧಿಗಳು ಪಾಲ್ಗೊಳ್ಳುತ್ತಾರೆ.
    ಈ ಬಾರಿ ಸಮಾಜಸೇವಕ, ಆಮ್ ಆದ್ಮಿ ಪಾರ್ಟಿ ಮುಖಂಡ ಆನಂದ್(ಮೆಡಿಕಲ್)ರವರು ಅನ್ನಸಂತರ್ಪಣೆ ಸೇವಾಕಾರ್ಯ ನೆರವೇರಿಸಿದರು. ಸಂಘಟನೆ ವತಿಯಿಂದ ಪ್ರತಿವರ್ಷ ಲಕ್ಕಿ ಡ್ರಾ ಏರ್ಪಡಿಸುವ ಮೂಲಕ ವಿಜೇತರಿಗೆ ಬೆಳ್ಳಿ ಗಣಪತಿ ಬಹುಮಾನವಾಗಿ ವಿತರಿಸಲಾಗುತ್ತಿದೆ. ಈ ಬಾರಿ ೩ ಮಂದಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಸೇರಿದಂತೆ ಸಂಘಟನೆ ಪ್ರಮುಖರು ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ನಗರದ ಪ್ರಮುಖ ವಿನಾಯಕ ಸಂಘಟನೆಗಳಲ್ಲಿ ಒಂದಾಗಿರುವ ಜನ್ನಾಪುರ ಶ್ರೀರಾಮರಾಜ್ಯ ಸಂಘಟನೆ ವತಿಯಿಂದ ಈ ಬಾರಿ ಶ್ರೀ ವಿನಾಯಕ ಪ್ರತಿಷ್ಠಾಪಿಸಲಾಗಿದ್ದು, ಪ್ರತಿವರ್ಷದಂತೆ ಈ ಬಾರಿ ಸಹ ಲಕ್ಕಿ ಡ್ರಾ ಏರ್ಪಡಿಸುವ ಮೂಲಕ ವಿಜೇತರಿಗೆ ಬೆಳ್ಳಿ ಗಣಪತಿ ಬಹುಮಾನವಾಗಿ ವಿತರಿಸಲಾಯಿತು.

No comments:

Post a Comment