Friday, October 7, 2022

ಶೌಚಾಲಯ ಗುಂಡಿಗೆ ಎಮ್ಮೆಕರು ಸಿಕ್ಕಿಹಾಕಿಕೊಂಡ ಪ್ರಕರಣ : ದೂರಿಗೆ ತಕ್ಷಣ ಸ್ಪಂದಿಸಿದ ನಗರಸಭೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಜಯಶ್ರೀ ವೃತ್ತದಲ್ಲಿರುವ ವಾರ್ಡ್ ನಂ.೩೩ರ ನಗರಸಭೆ ಹೈಟೆಕ್ ಶೌಚಾಲಯದ ಗುಂಡಿಯಲ್ಲಿ ಎಮ್ಮೆ ಕರು ಸಿಕ್ಕಿ ಹಾಕಿಕೊಂಡು ಸಂಕಷ್ಟಕ್ಕೆ ಒಳಗಾದ ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ನಗರಸಭೆ ಆಡಳಿತ ತಕ್ಷಣ ಜಾಗೃತಗೊಂಡು ತುರ್ತು ಕ್ರಮ ಕೈಗೊಂಡಿದೆ.
    ಭದ್ರಾವತಿ, ಅ. ೭: ನಗರಸಭೆ ವ್ಯಾಪ್ತಿಯ ಜನ್ನಾಪುರ ಜಯಶ್ರೀ ವೃತ್ತದಲ್ಲಿರುವ ವಾರ್ಡ್ ನಂ.೩೩ರ ನಗರಸಭೆ ಹೈಟೆಕ್ ಶೌಚಾಲಯದ ಗುಂಡಿಯಲ್ಲಿ ಎಮ್ಮೆ ಕರು ಸಿಕ್ಕಿ ಹಾಕಿಕೊಂಡು ಸಂಕಷ್ಟಕ್ಕೆ ಒಳಗಾದ ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ನಗರಸಭೆ ಆಡಳಿತ ತಕ್ಷಣ ಜಾಗೃತಗೊಂಡು ತುರ್ತು ಕ್ರಮ ಕೈಗೊಂಡಿದೆ.
    ಪೌರಾಯುಕ್ತ ಮನುಕುಮಾರ್‌ರವರು ತಕ್ಷಣ ಎಚ್ಚೆತ್ತುಕೊಂಡು ಇಂಜಿನಿಯರ್ ಕೆ.ಜಿ ಸಂತೋಷ್ ಪಾಟೀಲ್, ಸೂಪರ್ ವೈಸರ್ ಗೋವಿಂದ ನೇತೃತ್ವದ ತಂಡವನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದು, ಶೌಚಾಲಯ ಗುಂಡಿಯ ಮೇಲ್ಭಾಗವನ್ನು ಚಪ್ಪಡಿ ಕಲ್ಲಿನಿಂದ ಮುಚ್ಚಲಾಗಿದೆ. ಸದ್ಯಕ್ಕೆ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿದಿದೆ.
    ಈ ಹಿನ್ನಲೆಯಲ್ಲಿ ಬೀದಿಬದಿ ವ್ಯಾಪಾರಸ್ಥರು, ಆಟೋ ಚಾಲಕರು, ವಾರ್ಡಿನ ಸದಸ್ಯ ಆರ್. ಮೋಹನ್‌ಕುಮಾರ್ ಮತ್ತು ಮುಖಂಡ ಎಸ್.ಎಸ್ ಭೈರಪ್ಪ ಸೇರಿದಂತೆ ಇನ್ನಿತರರು ಕೃತಜ್ಞತೆ ಸಲ್ಲಿಸಿದ್ದಾರೆ.

No comments:

Post a Comment