ಸೈಯದ್ ನಿಯಾಜ್ ಜೆಫ್ರಿ
ಭದ್ರಾವತಿ, ನ. ೬ : ನಗರದ ನ್ಯಾಯವಾದಿ, ಹಳೇನಗರದ ಖಾಜಿ ಮೊಹಲ್ಲಾ ನಿವಾಸಿ ಸೈಯದ್ ನಿಯಾಜ್ ಜೆಫ್ರಿ(೫೦) ಶನಿವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.
ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರ ಹೊಂದಿದ್ದರು. ಹಲವಾರು ವರ್ಷಗಳಿಂದ ನ್ಯಾಯವಾದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಅಂತ್ಯಕ್ರಿಯೆ ಸಂಜೆ ತರೀಕೆರೆ ರಸ್ತೆಯಲ್ಲಿರುವ ಖಬರ್ಸ್ತಾನದಲ್ಲಿ ನೆರವೇರಿತು.
ತಾಲೂಕು ವಕೀಲರ ಸಂಘ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.
No comments:
Post a Comment