Tuesday, November 1, 2022

ಕನ್ನಡ ಭಾಷೆಗೆ ಸಮೃದ್ಧ ಸಾಹಿತ್ಯವಿದೆ : ಡಾ. ವಿಜಯದೇವಿ

ಭದ್ರಾವತಿ ನ್ಯೂಟೌನ್ ತಾಲೂಕು ಕನ್ನಡ ಪರಿಷತ್ ಕಛೇರಿಯಲ್ಲಿ ಮಂಗಳವಾರ ೬೭ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
    ಭದ್ರಾವತಿ, ನ. ೧ : ಕನ್ನಡ ಭಾಷೆ ತನ್ನದೇ ಆದ ಪರಂಪರೆಯನ್ನು ಹೊಂದಿದ್ದು, ಈ ಭಾಷೆಗೆ ಸಮೃದ್ಧ ಸಾಹಿತ್ಯವಿದೆ. ಆದರೆ ನಾವು ಅದರ ಕಡೆ ಗಮನ ಹರಿಸುತ್ತಿಲ್ಲ ಎಂದು ಎಮರೆಟಸ್ ಪ್ರಾಧ್ಯಾಪಕಿ ಡಾ. ವಿಜಯಾದೇವಿ ವಿಷಾದ ವ್ಯಕ್ತಪಡಿಸಿದರು.  
    ಅವರು ಮಂಗಳವಾರ ನ್ಯೂಟೌನ್ ತಾಲೂಕು ಕನ್ನಡ ಪರಿಷತ್ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ೬೭ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕನ್ನಡ ಭಾಷೆ, ಸಾಹಿತ್ಯ ಕುರಿತು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಈ ಮೂಲಕ ಭಾಷೆ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕೆಂದರು.
    ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಪರಿಷತ್ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಮಾತನಾಡಿ, ಕನ್ನಡ ಸಮೃದ್ಧ ಭಾಷೆಯಾಗಿದ್ದರೂ ಸಹ ಪ್ರಸ್ತುತ ಕನ್ನಡ ಭಾಷೆಗೆ ಎದುರಾಗಿರುವ ಆತಂಕಗಳ ಬಗ್ಗೆ ಎಚ್ಚರಿಸಿದರು.
    ಶಿಕ್ಷಕಿ, ಸಾಹಿತಿ ಇಂದಿರಾ ಪ್ರಾರ್ಥಿಸಿ, ಕಾರ್ಯದರ್ಶಿ ತಿಮ್ಮಪ್ಪ ಸ್ವಾಗತಿಸಿದರು. ನಾಗೋಜಿರಾವ್ ನಿರೂಪಿಸಿ, ಕೆ.ಟಿ ಪ್ರಸನ್ನ ವಂದಿಸಿದರು. ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಸಹಕಾರಿ ಧುರೀಣ ಗೊಂದಿಜಯರಾಂ, ಹಳೇನಗರ ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್, ಅನ್ನಪೂರ್ಣ, ಕವಿತಾ ರಾವ್, ಭಾಗ್ಯಮ್ಮ, ಕಾಂತಪ್ಪ, ಬಿ.ಗುರು, ಡಾ. ಹರೀಶ್, ಜಯಂತಿಶೇಟ್, ಪೀಟರ್, ಮೋಹನ್, ಮಂಜುನಾಥ್, ಕಮಲಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

No comments:

Post a Comment