ಡಿ.೩೧ರಂದು ಸಾಮೂಹಿಕ ಅನ್ನ ಸಂತರ್ಪಣೆ, ಉತ್ಸವ ಮೆರವಣಿಗೆ
ಪ್ರತಿ ವರ್ಷದಂತೆ ಈ ಬಾರಿ ಸಹ ನ್ಯೂಟೌನ್ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ವತಿಯಿಂದ ೫೧ನೇ ವರ್ಷದ ಅಯ್ಯಪ್ಪಸ್ವಾಮಿ ದೀಪೋತ್ಸವ ೩ ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದು, ಗುರುವಾರ ಧ್ವಜಾರೋಹಣ ನೆರವೇರಿಸುವುದರ ಮೂಲಕ ದೀಪೋತ್ಸವಕ್ಕೆ ಸಮಿತಿ ಅಧ್ಯಕ್ಷ ಎಸ್. ಜಯಕೃಷ್ಣ ಚಾಲನೆ ನೀಡಿದರು.
ಭದ್ರಾವತಿ, ಡಿ. ೨೯: ಪ್ರತಿ ವರ್ಷದಂತೆ ಈ ಬಾರಿ ಸಹ ನ್ಯೂಟೌನ್ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ವತಿಯಿಂದ ೫೧ನೇ ವರ್ಷದ ಅಯ್ಯಪ್ಪಸ್ವಾಮಿ ದೀಪೋತ್ಸವ ೩ ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದು, ಗುರುವಾರ ಧ್ವಜಾರೋಹಣ ನೆರವೇರಿಸುವುದರ ಮೂಲಕ ದೀಪೋತ್ಸವಕ್ಕೆ ಸಮಿತಿ ಅಧ್ಯಕ್ಷ ಎಸ್. ಜಯಕೃಷ್ಣ ಚಾಲನೆ ನೀಡಿದರು.
ಬೆಳಿಗ್ಗೆ ನಿರ್ಮಾಲ್ಯದರ್ಶನಂ, ಮಹಾಗಣಪತಿ ಹೋಮ, ಉಷಃ ಪೂಜೆ, ಅಷ್ಟಾಭಿಷೇಕ, ಕಳಸ ಪೂಜೆ ನವಗಂ ನಂತರ ಕಳಸಾಭಿಷೇಕ, ಸಂಜೆ ಅಲಂಕಾರ, ದೀಪಾರಾಧನೆ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು.
ಡಿ.೩೦ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಮಹಾಮೃತ್ಯುಂಜಯ ಹೋಮ, ನಂತರ ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ವಿಶೇಷ ಪೂಜೆ, ಅಯ್ಯಪ್ಪಸ್ವಾಮಿಗೆ ಕಳಸಾಭಿಷೇಕ, ಭಗವತಿಗೆ ಕುಂಕುಮಾಭಿಷೇಕ, ಶಿವನಿಗೆ ಭಸ್ಮಾಭಿಷೇಕ, ಸಂಜೆ ಭಗವತಿ ಸೇವೆ, ಅಲಂಕಾರ ದೀಪಾರಾಧನೆ, ರಾತ್ರಿ ಅತ್ತಾಳ ಪೂಜೆ ನಂತರ ಚಂಡೆವಾದ್ಯ ನಡೆಯಲಿದೆ.
ಡಿ.೩೧ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಅಷ್ಟಾಭಿಷೇಕ, ಅಯ್ಯಪ್ಪಸ್ವಾಮಿ ಹಾಗು ಭಗವತಿಗೆ ಚಂದನಾಲಂಕಾರ, ಹೂವಿನ ಅಭಿಷೇಕ, ಮಧ್ಯಾಹ್ನ ೧೨ಕ್ಕೆ ಸಾಮೂಹಿಕ ಅನ್ನಸಂತರ್ಪಣೆ ಹಾಗು ಸಂಜೆ ರಾಜಬೀದಿ ಉತ್ಸವ ಮೆರವಣಿಗೆ ನಡೆಯಲಿದೆ.
ಧ್ವಜಾರೋಹಣ ಸಂದರ್ಭದಲ್ಲಿ ಸೇವಾ ಸಮಿತಿ ಉಪಾಧ್ಯಕ್ಷ ವಿ. ಬಾಬು, ಪ್ರಧಾನ ಕಾರ್ಯದರ್ಶಿ ಟಿ.ಪಿ ಸುಬ್ರಮಣ್ಯ, ಕಾರ್ಯದರ್ಶಿ ಶೇಖ್ಯಾನಾಯ್ಕ, ಖಜಾಂಚಿ ರಾಮಮೊಗವೀರ, ಸದಸ್ಯರಾದ ಪಿ.ಆರ್ ಪ್ರಭಾಕರ್, ಆರ್. ರಾಧಕೃಷ್ಣನ್, ಡಿ. ಗಿರೀಶ್ ಪಿಳ್ಳೆ, ಕೆ.ಸಿ ರಾಜಶೇಖರ್, ಕೆ. ಮಧುಕುಮಾರ್ ಹಾಗು ಕೇರಳ ಸಮಾಜಂ ಹಾಗು ಮಹಿಳಾ ಘಟಕ ಮತ್ತು ಯುವ ಘಟಕದ ಪದಾಧಿಕಾರಿಗಳು ಹಾಗು ಅಯ್ಯಪ್ಪ ಸ್ವಾಮಿ ಗುರುಮೂರ್ತಿ, ಮಾಲಾಧಾರಿಗಳು ಮತ್ತು ಭಕ್ತರು ಉಪಸ್ಥಿತರಿದ್ದರು.
No comments:
Post a Comment