ಎಸ್. ರಾಮಕೃಷ್ಣ
ಭದ್ರಾವತಿ, ಜ. ೧೦: ಕುವೆಂಪು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಎಸ್. ರಾಮಕೃಷ್ಣ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದ್ದು, ಈ ಸಂಬಂಧ ವಿಶ್ವವಿದ್ಯಾಲಯದ ಮಾನವ ಸಂಪನ್ಮೂಲ ಮತ್ತು ನಿರ್ವಹಣೆ ವಿಭಾಗದ ಉಪ ಕುಲಸಚಿವರು ಕಛೇರಿ ಆದೇಶ ಹೊರಡಿಸಿದ್ದಾರೆ.
ರಾಮಕೃಷ್ಣರವರು ೧ ಜುಲೈ, ೨೦೨೦ರಿಂದ ವಿಶ್ವವಿದ್ಯಾಲಯದಲ್ಲಿ ಹಣಕಾಸು ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜ.೧೦ರ ಕುಲಪತಿಗಳ ಆದೇಶದ ಮೇರೆಗೆ ಇವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದ್ದು, ಮಾತೃ ಇಲಾಖೆಯ ಸೇವೆಗೆ ಹಿಂದಿರುಗಿಸಲಾಗಿದೆ. ಇವರ ಕರ್ತವ್ಯದ ಹೊಣೆಯನ್ನು ಕುಲಸಚಿವರು(ಪರೀಕ್ಷಾಂಗ) ಇವರಿಗೆ ವಹಿಸಲಾಗಿದೆ.
No comments:
Post a Comment