ಭದ್ರಾವತಿ, ಜ. ೨೬ : ಮುಕ್ತಿವಾಹಿನಿ ವಾಹನ ಸೇವೆ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಹೊಸ ವಾಹನ ಖರೀದಿಸುವಂತೆ ಜೆಡಿಎಸ್ ಪಕ್ಷದಿಂದ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.
೩೫ ವಾರ್ಡ್ಗಳನ್ನು ಹೊಂದಿರುವ ನಗರಸಭೆಯಲ್ಲಿ ೨ ಮುಕ್ತಿವಾಹಿನಿ ವಾಹನಗಳಿದ್ದು, ಈ ಪೈಕಿ ಒಂದು ವಾಹನ ಮಾತ್ರ ಸೇವೆಯಲ್ಲಿರುತ್ತದೆ. ಮತ್ತೊಂದು ವಾಹನ ಹಲವಾರು ದಿನಗಳಿಂದ ದುರಸ್ತಿಯಲ್ಲಿದೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸೂಕ್ತ ಸಮಯದಲ್ಲಿ ಸೇವೆ ಒದಗಿಸಲು ಹೊಸ ಮುಕ್ತಿವಾಹಿನಿ ವಾಹನ ಖರೀದಿಸಿ ತೊಂದರೆಯನ್ನು ತಪ್ಪಿಸುವಂತೆ ಪಕ್ಷದ ನಗರ ಘಟಕದ ಅಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ, ಸದಸ್ಯರಾದ ಬಸವರಾಜ ಬಿ. ಆನೇಕೊಪ್ಪ, ಉದಯ್ಕುಮಾರ್, ಸವಿತಾ ಉಮೇಶ್, ನಾಗರತ್ನ ಅನಿಲ್ಕುಮಾರ್, ಮಂಜುಳ ಸುಬ್ಬಣ್ಣ ಸೇರಿದಂತೆ ಇನ್ನಿತರರು ಮನವಿಯಲ್ಲಿ ಆಗ್ರಹಿಸಿದ್ದಾರೆ.
No comments:
Post a Comment