Tuesday, January 3, 2023

ಸಹಾಯಕ ಪ್ರಾಧ್ಯಾಪಕ ಎಂ.ಎಚ್ ವಿದ್ಯಾಶಂಕರ್ ಕರ್ತವ್ಯಕ್ಕೆ ಮರುನಿಯುಕ್ತಿ


ಎಂ.ಎಚ್ ವಿದ್ಯಾಶಂಕರ್
    ಭದ್ರಾವತಿ, ಜ. ೩ : ನಗರದ ನಿವಾಸಿ, ಪ್ರಾಧ್ಯಾಪಕ ಎಂ.ಎಚ್ ವಿದ್ಯಾಶಂಕರ್‌ರವರನ್ನು ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳು ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕರ ಸೇವೆಗೆ ಮರುನಿಯುಕ್ತಿಗೊಳಿಸಿದ್ದಾರೆ.
    ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಎಂ.ಎಚ್ ವಿದ್ಯಾಶಂಕರ್‌ರವರು ಕರ್ತವ್ಯ ನಿರ್ವಹಿಸುತ್ತಿದ್ದು, ಉಚ್ಛ ನ್ಯಾಯಾಲಯದ ಮಧ್ಯಂತರ ಆದೇಶದ ಮೇರೆಗೆ ಡಿ.೨೮ರಂದು ಕುಲಪತಿಗಳು ಡಿ.೧೫ರಿಂದ ಜಾರಿಗೆ ಬರುವಂತೆ ಸೇವೆಗೆ ಮರುನಿಯುಕ್ತಿಗೊಳಿಸಿ ಅನುಮೋದಿಸಿದ್ದಾರೆಂದು ವಿಶ್ವವಿದ್ಯಾಲಯದ ಕುಲಸಚಿವರು ಕಛೇರಿ ಆದೇಶದಲ್ಲಿ ತಿಳಿಸಿದ್ದಾರೆ.

No comments:

Post a Comment