Tuesday, January 3, 2023

ಜಯಂತಿ ಸ್ಟೋರ್ ಮಾಲೀಕ ಆನಂದ್ ಕುಮಾರ್ ನಿಧನ

ಆನಂದ್ ಕುಮಾರ್
    ಭದ್ರಾವತಿ, ಜ. ೩ : ನಗರದ ಸಿ.ಎನ್ ರಸ್ತೆ ಜಯಂತಿ ಸ್ಟೋರ‍್ಸ್ ಮಾಲೀಕ, ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಬೆಂಬಲಿಗ ಆನಂದ್ ಕುಮಾರ್(೫೦) ಸೋಮವಾರ ಬೆಳಿಗ್ಗೆ ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ ಇದ್ದರು. ಜೈನ ಸಮಾಜದ ಮುಖಂಡರಾದ ಆನಂದಕುಮಾರ್ ಭದ್ರಾವತಿ ನಗರದಲ್ಲಿಯೇ ಹುಟ್ಟಿ ಬೆಳೆದಿದ್ದು, ಕಳೆದ ಸುಮಾರು ೨ ವರ್ಷಗಳಿಂದ ಗುಜರಾತ್ ಅಹಮದಬಾದ್‌ನಲ್ಲಿ ವಾಸಿಸುತ್ತಿದ್ದರು. ಇವರ ನಿಧನಕ್ಕೆ ಜೆಡಿಎಸ್ ಹಾಗು ಕಾಂಗ್ರೆಸ್ ಪಕ್ಷದ ಮುಖಂಡರು, ಜೈನ ಸಮಾಜದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

No comments:

Post a Comment