Sunday, January 22, 2023

ಭದ್ರಾವತಿ ಕ್ಷೇತ್ರದ ಸಮಸ್ಯೆಗಳ ನಿವಾರಣೆಗಾಗಿ ಓಂ ಶಕ್ತಿ ದೇವಿಗೆ ಹರಕೆ ಹೊತ್ತ ಶಾರದ ಅಪ್ಪಾಜಿ

ಇರುಮುಡಿ ಹೊತ್ತು ತಮಿಳುನಾಡಿನ ಮೇಲ್‌ಮರವತ್ತೂರು ದೇವಾಲಯಕ್ಕೆ ಪ್ರಯಾಣ

ಭದ್ರಾವತಿ ಕ್ಷೇತ್ರದಲ್ಲಿನ ಸಮಸ್ಯೆಗಳು ನಿವಾರಣೆಯಾಗುವ ಮೂಲಕ ಜನರು ಸಂಕಷ್ಟಗಳಿಂದ ಹೊರ ಬರಲಿ ಎಂಬ ಸಂಕಲ್ಪದೊಂದಿಗೆ ವಿಧಾನಸಭಾ ಚುನಾವಣೆ ಜೆಡಿಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿ ಓಂ ಶಕ್ತಿ ದೇವಿಯ ಇರುಮುಡಿ ಹೊತ್ತು ತಮಿಳುನಾಡಿನ ಮೇಲ್‌ಮರವತ್ತೂರು ದೇವಾಲಯಕ್ಕೆ ತೆರಳಿದ್ದಾರೆ.
    ಭದ್ರಾವತಿ, ಜ. ೨೩  :  ಕ್ಷೇತ್ರದಲ್ಲಿನ ಸಮಸ್ಯೆಗಳು ನಿವಾರಣೆಯಾಗುವ ಮೂಲಕ ಜನರು ಸಂಕಷ್ಟಗಳಿಂದ ಹೊರ ಬರಲಿ ಎಂಬ ಸಂಕಲ್ಪದೊಂದಿಗೆ ವಿಧಾನಸಭಾ ಚುನಾವಣೆ ಜೆಡಿಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿ ಓಂ ಶಕ್ತಿ ದೇವಿಯ ಇರುಮುಡಿ ಹೊತ್ತು ತಮಿಳುನಾಡಿನ ಮೇಲ್‌ಮರವತ್ತೂರು ದೇವಾಲಯಕ್ಕೆ ತೆರಳಿದ್ದಾರೆ.
    ಕಳೆದ ಕೆಲವು ದಿನಗಳಿಂದ ಮಡಿಬಟ್ಟೆಯೊಂದಿಗೆ ದೇವಿಯ ಆರಾಧನೆಯಲ್ಲಿ ತೊಡಗಿಸಿಕೊಂಡಿರುವ ಶಾರದ ಅಪ್ಪಾಜಿಯವರು ಶನಿವಾರ ಇರುಮುಡಿ ಹೊತ್ತು ಭಕ್ತರೊಂದಿಗೆ ಪ್ರಯಾಣ ಬೆಳೆಸಿದ್ದು, ಜ.೨೫ರಂದು ದೇವಿಗೆ ಇರುಮುಡಿ ಸಮರ್ಪಿಸಲಿದ್ದಾರೆ.
    ಶಾರದಾ ಅಪ್ಪಾಜಿ ಅವರೊಂದಿಗೆ ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಮಧು ಕುಮಾರ್ ಸೇರಿದಂತೆ ಪ್ರಮುಖರು, ಕಾರ್ಯಕರ್ತರು ಸಹ ದೇವಿಯ ದರ್ಶನಕ್ಕೆ ತೆರಳಿದ್ದಾರೆ. ನಗರದಲ್ಲಿ ಓಂ ಶಕ್ತಿ ದೇವಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಪ್ರತಿವರ್ಷ ಸಾವಿರಾರು ಭಕ್ತರು ಇರುಮುಡಿ ಹೊತ್ತು ದೇವಿಗೆ ಸಮರ್ಪಿಸುವ ಮೂಲಕ ಭಕ್ತಿ ಮೆರೆದಿದ್ದಾರೆ.


    ನೆಲಸಮಗೊಂಡ ಓಂಶಕ್ತಿ ದೇವಾಲಯ:
    ನಗರದ ಹುಡ್ಕೋ ಕಾಲೋನಿ ಬೈಪಾಸ್ ರಸ್ತೆಯಲ್ಲಿರುವ ಮೇಲ್‌ಮರವತ್ತೂರು ದೇವಾಲಯವನ್ನು ರಸ್ತೆ ಅಗಲೀಕರಣಕ್ಕಾಗಿ ಕಳೆದ ಕೆಲವು ಹಿಂದೆ ನೆಲಸಮಗೊಳಿಸಲಾಗಿದೆ. ದೇವಸ್ಥಾನ ಉಳಿಸಿಕೊಡುವಂತೆ ದೇವಸ್ಥಾನ ಸಮಿತಿಯವರು ಹಾಗು ಭಕ್ತರು ಸಂಸದ ಬಿ.ವೈ ರಾಘವೇಂದ್ರರಿಗೆ ಮನವಿ ಮಾಡಿದ್ದರು. ಆದರೆ ದೇವಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ.

No comments:

Post a Comment