Sunday, January 22, 2023

ಪತ್ರಕರ್ತ ಅನಂತಕುಮಾರ್‌ಗೆ ‘ಕನ್ನಡ ತಿಲಕ’ ರಾಜ್ಯ ಪ್ರಶಸ್ತಿ

ಸಮೃದ್ಧಿ ಫೌಂಡೇಷನ್, ಕೆಂಗೇರಿ, ಕೊಮ್ಮಘಟ್ಟ, ಬೆಂಗಳೂರು ಇದರ ೯ನೇ ವಾರ್ಷಿಕೋತ್ಸವದ ಸಂಭ್ರಮ, ಕಥಾಬಿಂದು ಪ್ರಕಾಶನ ಮಂಗಳೂರು ಮತ್ತು ಕನ್ನಲ್ಲಿ ವೀರಶೈವ ನಿತ್ಯಾನ್ನ ದಾಸೋಹ ಸೇವಾ ಸಮಿತಿ ವತಿಯಿಂದ ಪಿ.ವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ  ಬೆಂಗಳೂರಿನ  ಶ್ರೀ ವೀರಭದ್ರೇಶ್ವರ ಸುಕ್ಷೇತ್ರ ಕನ್ನಲ್ಲಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಥಾಬಿಂದು ಕನ್ನಡ ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭದ್ರಾವತಿ ನಗರದ ಪತ್ರಕರ್ತ ಅನಂತಕುಮಾರ್‌ರವರಿಗೆ 'ಕನ್ನಡ ತಿಲಕ' ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
    ಭದ್ರಾವತಿ, ಜ. ೨೨: ಸಮೃದ್ಧಿ ಫೌಂಡೇಷನ್, ಕೆಂಗೇರಿ, ಕೊಮ್ಮಘಟ್ಟ, ಬೆಂಗಳೂರು ಇದರ ೯ನೇ ವಾರ್ಷಿಕೋತ್ಸವದ ಸಂಭ್ರಮ,  ಕಥಾಬಿಂದು ಪ್ರಕಾಶನ ಮಂಗಳೂರು ಮತ್ತು ಕನ್ನಲ್ಲಿ ವೀರಶೈವ ನಿತ್ಯಾನ್ನ ದಾಸೋಹ ಸೇವಾ ಸಮಿತಿ ವತಿಯಿಂದ ಪಿ.ವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ  ಬೆಂಗಳೂರಿನ  ಶ್ರೀ ವೀರಭದ್ರೇಶ್ವರ ಸುಕ್ಷೇತ್ರ ಕನ್ನಲ್ಲಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಥಾಬಿಂದು ಕನ್ನಡ ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಗರದ ಪತ್ರಕರ್ತ ಅನಂತಕುಮಾರ್‌ರವರಿಗೆ  'ಕನ್ನಡ ತಿಲಕ' ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
   ತಾವರೆಕೆರೆ ಶಿಲಾಮಠದ ಶ್ರೀ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಪತ್ರಿಕಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
       ಕನ್ನಲ್ಲಿ ವೀರಶೈವ ನಿತ್ಯನ್ನ ದಾಸೋಹ ಸೇವಾ ಸಮಿತಿ ಅಧ್ಯಕ್ಷ ಡಾ. ಶಾಂತರಾಜು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮರಳು ಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ  ಸಿದ್ದಲಿಂಗಯ್ಯ, ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಪಿ. ವಿ. ಪ್ರದೀಪ್ ಕುಮಾರ್, ಸಮೃದ್ಧಿ ಫೌಂಡೇಷನ್ ಅಧ್ಯಕ್ಷ ರುದ್ರಾರಾಧ್ಯ, ಲಕ್ಷ್ಮಿಕಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುಮಾರು ೩೦ಕ್ಕೂ ಮಂದಿಗೆ 'ಕನ್ನಡ ತಿಲಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುಮಾರು ೩೫ಕ್ಕೂ ಮಂದಿ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಕವಿತೆಗಳನ್ನು ವಾಚಿಸಿದರು. ಬಿ.ಎಂ ಮಾಣಿಯಾಟ್‌ರವರ ಅಧಿಕಾರ ಕಾದಂಬರಿ, ದಿವ್ಯಮಯ್ಯರವರ ಪರಶುರಾಮ ಕ್ಷೇತ್ರ ಮತ್ತು ಮೈಸೂರು ಟಿ. ತ್ಯಾಗರಾಜುರವರ ಜೀವ ಭಾವ ಕವನ ಸಂಕಲನ ಪುಸ್ತಕಗಳು ಬಿಡುಗಡೆಗೊಂಡವು.
    ಸಮ್ಮೇಳನ ಸಂಚಾಲಕರಾಗಿ ರೇಖಾ ಸುದೇಶ್ ರಾವ್, ಕವಿಗೋಷ್ಠಿ ಸಂಚಾಲಕರಾಗಿ ಆಶಾ ಶಿವು, ಸುನೀತಾ ಪ್ರದೀಪ್‌ಕುಮಾರ್ ಮತ್ತು ದರ್ಶಿನಿ ಆರ್ ಪ್ರಸಾದ್, ಕೆ.ಎ ಬಿಂದು, ರೇಷ್ಮಶೆಟ್ಟಿ ಗೊರೂರು ಹಾಗು ಪೂರ್ಣಿಮಾ ನಿರೂಪಿಸಿದರು.  

No comments:

Post a Comment