Wednesday, January 4, 2023

ನ್ಯಾಯಾಲಯಕ್ಕೆ ಆಗಮಿಸಿದ್ದ ವ್ಯಕ್ತಿಗೆ ಹೃದಯಾಘಾತ : ನಿಧನ

ಎಂ.ಆರ್ ಗೋಪಾಲಕೃಷ್ಣ
    ಭದ್ರಾವತಿ, ಜ. ೪: ನಗರದ ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆ ಸಂಬಂಧ ಆಗಮಿಸಿದ್ದ ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.  
    ಶಿವಮೊಗ್ಗ ನಿವಾಸಿ ಎಂ.ಅರ್ ಗೋಪಾಲಕೃಷ್ಣ (೭೨ ) ಮೃತಪಟ್ಟಿದ್ದು, ಪತ್ನಿ ಹಾಗು ಇಬ್ಬರು ಪುತ್ರರು ಇದ್ದರು. ಬೆಳಿಗ್ಗೆ ನ್ಯಾಯಾಧೀಶರ ಕೊಠಡಿ ಹೊರಗೆ ಕುಳಿತು ಕೊಂಡಿದ್ದಾಗ ಏಕಾಏಕಿ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ.
    ಗೋಪಾಲಕೃಷ್ಣರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷೆ ನಡೆಸಿದ ವೈದ್ಯರು ಮೃತಪಟ್ಟಿರುವುದು ಖಚಿತ ಪಡಿಸಿದ್ದಾರೆ. ನಂತರ ಮೃತದೇಹವನ್ನು ಶಿವಮೊಗ್ಗಕ್ಕೆ ಕಳುಹಿಸಲಾಯಿತು. ನಗರದ ಆರ್ಯವೈಶ್ಯ ಸಮಾಜ ಸಂತಾಪ ಸೂಚಿಸಿದೆ.
    ಶಿವಮೊಗ್ಗ ಸೋಮಿನಕೊಪ್ಪ ನಿವಾಸಿ ಗೋಪಾಲಕೃಷ್ಣರವರು ಪ್ರಕರಣವೊಂದರ ವಿಚಾರಣೆಗಾಗಿ ಇಲ್ಲಿನ ನ್ಯಾಯಾಲಯಕ್ಕೆ ಆಗಾಗ ಬಂದು ಹೋಗುತ್ತಿದ್ದರು ಎನ್ನಲಾಗಿದೆ.

No comments:

Post a Comment