Sunday, February 26, 2023

ಗುತ್ತಿಗೆ ಕಾರ್ಮಿಕರಿಂದ ಪಾದಯಾತ್ರೆಗೆ ಸಿದ್ಧತೆ: ವಶಕ್ಕೆ ಪಡೆಯಲು ಮುಂದಾಗಿರುವ ಪೊಲೀಸರು

   ಭದ್ರಾವತಿ, ಫೆ. 27: ನಗರದ  ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ  ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರ ಸೋಮವಾರ ಸಹ ಮುಂದುವರೆದಿದೆ. 
   ಗುತ್ತಿಗೆ ಕಾರ್ಮಿಕರ ಹೋರಾಟ ನಿಯಂತ್ರಿಸಲು ಪೊಲೀಸರು ಭಾನುವಾರ ರಾತ್ರಿಯಿಂದಲೇ ಕಾರ್ಯಚರಣೆಕ್ಕೆ ನಡೆಸಿದ್ದು, ಕಾರ್ಖಾನೆ ಮುಂಭಾಗ ಹೆಚ್ಚಿನ ಪೋಲಿಸ್ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. 
   ಶಿವಮೊಗ್ಗ ಸೋಗನೆಯಲ್ಲಿ ನೂತನ ವಿಮಾನ ನಿಲ್ದಾಣ ಉದ್ಘಾಟನೆ ಸ್ಥಳಕ್ಕೆ ಪಾದಯಾತ್ರೆ ಮೂಲಕ ತೆರಳಲು ಗುತ್ತಿಗೆ ಕಾರ್ಮಿಕರು  ಸಿದ್ಧತೆ ನಡೆಸುತ್ತಿದ್ದು, ಪೊಲೀಸರು ಕಾರ್ಮಿಕರನ್ನು ವಶಕ್ಕೆ ಪಡೆಯಲು  ಮುಂದಾಗಿದ್ದಾರೆ.  ಈ ನಡುವೆ ಹೋರಾಟ ಬೆಂಬಲಿಸಲು ವಿವಿಧ ಸಂಘಟನೆಗಳು ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ಬೆಳಿಗ್ಗೆಯಿಂದ ಕಾರ್ಖಾನೆ ಮುಂಭಾಗ ಬಿಗುವಿನ ಪರಿಸ್ಥಿತಿ ನಿರ್ಮಾಣಗೊಂಡಿದೆ.




No comments:

Post a Comment