Sunday, February 26, 2023

೫ ದಶಕಗಳ ಹಿಂದೆಯೇ ಸಣ್ಣ ಮಾದರಿ ವಿಮಾನಗಳ ಹಾರಾಟ

ಭದ್ರಾವತಿಯಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ೭೦ರ ದಶಕದಲ್ಲಿ ಸಣ್ಣ ಮಾದರಿಯ ವಿಮಾನಗಳು ಬಂದಿಳಿಯಲು ನಿರ್ಮಿಸಲಾಗಿದ್ದ ಮಣ್ಣಿನ ರನ್‌ವೇ ಕುರುಹು ಇಂದಿಗೂ ಕಂಡು ಬರುತ್ತಿದೆ.
    ಭದ್ರಾವತಿ, ಫೆ. ೨೬: ಇದೀಗ ಜಿಲ್ಲೆಯಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣಗೊಂಡಿದೆ. ಇಲ್ಲಿನ ಜನರು ಕಳೆದ ೧ ವಾರದಿಂದ ವಿಮಾನಗಳ ಹಾರಾಟ ಕಂಡು ಸಂಭ್ರಮಿಸುತ್ತಿದ್ದಾರೆ. ನೂತನ ವಿಮಾನ ನಿಲ್ದಾಣಕ್ಕೆ ಇದುವರೆಗೂ ೨ ವಿಮಾನಗಳು ಬಂದಿಳಿದಿವೆ. ಆದರೆ ೫ ದಶಕ ಹಿಂದೆಯೇ ಇಲ್ಲಿ ವಿಮಾನಗಳ ಹಾರಾಟ ಕಂಡು ಬರುತ್ತಿದ್ದವು. ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ಸಣ್ಣ ಮಾದರಿ ವಿಮಾನಗಳು ಬಂದಿಳಿಯಲು ಸುಮಾರು ೧ ಕಿ.ಮೀ ಉದ್ದದ ರನ್‌ವೇ ಬೊಮ್ಮನಕಟ್ಟೆ-ಹೊಸನಂಜಾಪುರ ಮಾರ್ಗದಲ್ಲಿ ನಿರ್ಮಿಸಲಾಗಿತ್ತು. 
    ಹಳ್ಳದಿಂದ ಕೂಡಿದ್ದ ಜಾಗವನ್ನು ಅಂದಿನ ಕಾಲದಲ್ಲಿಯೇ ಕೋಟ್ಯಾಂತರ ವೆಚ್ಚದಲ್ಲಿ ಸಮತಟ್ಟು ಮಾಡಿ ಮಣ್ಣಿನ ಗಟ್ಟಿಮುಟ್ಟಾದ ರನ್‌ವೇ ನಿರ್ಮಿಸಲಾಗಿತ್ತು. ೧೯೭೦ರ ಅವಧಿಯಲ್ಲಿ ಕಾರ್ಖಾನೆ ಕೈಗೊಂಡಿದ್ದ ಹಲವು ಯೋಜನೆಗಳಲ್ಲಿ ಇದು ಸಹ ಒಂದಾಗಿತ್ತು.
    ಇದನ್ನು ಏರ್‌ಪೋರ್ಟ್ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿತ್ತು. ದೇಶ ವಿದೇಶಗಳಿಂದ ಕಾರ್ಖಾನೆಗೆ ಇಂಜಿನಿಯರ್‌ಗಳು, ಅಧಿಕಾರಿಗಳು ಬಂದು ಹೋಗುತ್ತಿದ್ದರು. ಅಂದು ವಿಮಾನಗಳ ಹಾರಾಟ ಕಂಡಿರುವ ಬಹಳಷ್ಟು ನಿವೃತ್ತ ಕಾರ್ಮಿಕರು ಇಂದಿಗೂ ಹಳೇಯ ದಿನಗಳನ್ನು ನೆನಪಿಸಿಕೊಂಡು ಸಂಭ್ರಮಿಸುತ್ತಾರೆ.      ಈ ಹಿಂದೆ ಕೇಂದ್ರ ಸರ್ಕಾರದಲ್ಲಿ ಕೇಂದ್ರ ವಿಮಾನ ಖಾತೆ ಸಚಿವರಾಗಿದ್ದ ದಿವಂಗತ ಅನಂತಕುಮಾರ್‌ರವರು ಇದೆ ರನ್‌ವೇ ಬಳಸಿಕೊಂಡು ನೂತನ ವಿಮಾನ ನಿಲ್ದಾಣ ನಿರ್ಮಿಸಲು ಮುಂದಾಗಿದ್ದರು. ಆದರೆ ಹಲವಾರು ಕಾರಣಗಳಿಂದ ಇದು ಸಾಧ್ಯವಾಗಲಿಲ್ಲ. ಈ ರನ್‌ವೇ ಕುರುಹುಗಳು ಇಂದಿಗೂ ಉಳಿದುಕೊಂಡಿದ್ದು, ಈ ನಡುವೆ ಈ ಜಾಗದ ಸ್ವಲ್ಪ ಭಾಗ ನಿವೇಶನಗಳಾಗಿ ಬದಲಾಗಿದೆ. ಕೆಲವು ವಸತಿಗಳು ನಿರ್ಮಾಣಗೊಂಡಿದ್ದು, ಇನ್ನೂ ಸ್ವಲ್ಪ ಭಾಗ ಅರಣ್ಯ ಇಲಾಖೆಗೆ ಬಿಟ್ಟು ಕೊಡಲಾಗಿದೆ. ಈ ಭಾಗದಲ್ಲಿ ಟೀ ಪಾರ್ಕ್ ನಿರ್ಮಾಣಗೊಂಡಿದೆ. ಮತ್ತೊಂದೆಡೆ ಸರ್.ಎಂ ವಿಶೇಶ್ವರಾಯ ವಿಜ್ಞಾನ ಕಾಲೇಜು ವಿಸ್ತರಿಸಿಕೊಂಡಿದೆ

No comments:

Post a Comment