ಭದ್ರಾವತಿ ರಾಮಚಾರಿ ಚಿತ್ರ ಕಥೆ, ಸಂಭಾಷಣೆ : ಮೇ ತಿಂಗಳಿನಲ್ಲಿ ಚಿತ್ರೀಕರಣ
ಕನ್ನಡ ಸಾರಸ್ವತ ಲೋಕದ ಕವಿ ಡಾ. ದೊಡ್ಡರಂಗೇಗೌಡರ "ಪ್ರೀತಿ ಪ್ರಗಾಥ" ಕಾವ್ಯ ಚಲನಚಿತ್ರವಾಗುತ್ತಿದ್ದು, ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಈ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ಭದ್ರಾವತಿ, ಫೆ. ೭: ಕನ್ನಡ ಸಾರಸ್ವತ ಲೋಕದ ಕವಿ ಡಾ. ದೊಡ್ಡರಂಗೇಗೌಡರ "ಪ್ರೀತಿ ಪ್ರಗಾಥ" ಕಾವ್ಯ ಚಲನಚಿತ್ರವಾಗುತ್ತಿದ್ದು, ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ
ಸಹ ನಿರ್ದೇಶಕ ನವಿಲು ಗರಿ ನವೀನ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾಹಿತಿ ಡಾ. ಭದ್ರಾವತಿ ರಾಮಾಚಾರಿ ಚಿತ್ರ ಕಥೆ, ಸಂಭಾಷಣೆ ನಿರ್ವಹಿಸಲಿದ್ದಾರೆ. ಈ ಚಿತ್ರಕ್ಕೆ ಇಂದೂ ವಿಶ್ವನಾಥ್ ಅವರ ಸಂಗೀತ ಸಂಯೋಜನೆ ಡಾ .ದೊಡ್ಡರಂಗೇಗೌಡರೇ ಗೀತೆಗಳನ್ನು ರಚಿಸಿದ್ದಾರೆ.
ವಿಭಿನ್ನ ಪ್ರೇಮ ಕಥಾ ಹಂದರವುಳ್ಳ ಈ ಚಿತ್ರದ ನಾಯಕನ ಪಾತ್ರದಲ್ಲಿ ಅನಿಕ್ ಎಂಬ ಹೊಸ ಪ್ರತಿಭೆಯನ್ನು ಪರಿಚಯಿಸಲಾಗುತ್ತಿದ್ದು, ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಈ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ಪ್ರದೀಪ್, ಹರ್ಷ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸುವ ಸಿದ್ದತೆಯಲ್ಲಿದ್ದು, ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
No comments:
Post a Comment