Sunday, March 12, 2023

ಭೂ ಮಂಜೂರಾತಿ ರದ್ದುಗೊಳಿಸಲು, ಟಿಟಿ ದಂಡ ಶುಲ್ಕ ಮರುಪಾವತಿಸಲು ಕೋರಿ ಉಪವಿಭಾಗಾಧಿಕಾರಿಗಳಿಗೆ ಪ್ರಸ್ತಾವನೆ


    ಭದ್ರಾವತಿ, ಮಾ. ೧೨ : ತಾಲೂಕಿನ ಸಿದ್ದಾಪುರ ಗ್ರಾಮದ ಸರ್ವೆ ನಂ.೧೩೫ರ ಭೂ ಮಂಜೂರಾತಿ ರದ್ದುಗೊಳಿಸುವಂತೆ ಹಾಗು ಟಿಟಿ ದಂಡ ಶುಲ್ಕ ಅರ್ಜಿದಾರರಿಗೆ ಮರು ಪಾವತಿಸಲು ಕ್ರಮ ಕೈಗೊಳ್ಳುವಂತೆ ತಾಲೂಕು ದಂಡಾಧಿಕಾರಿ ತಹಸೀಲ್ದಾರ್‌ರವರು ಉಪವಿಭಾಗಾಧಿಕಾರಿಗಳಿಗೆ ಕೋರಿದ್ದಾರೆ.
    ಜಮೀನು ಕರ್ನಾಟಕ ಭೂ ಕಂದಾಯ ನಿಯಮಗಳು ೧೯೬೬ರ ನಿಯಮ ೧೦೮ (I) ರಂತೆ ನಗರ ವ್ಯಾಪ್ತಿ ಪ್ರದೇಶವಾಗಿದ್ದು, ಹಾಗು 'ಸಿದ್ದಾಪುರ ಆರ್‌ಎಲ್ ಅರಣ್ಯ ಪ್ರದೇಶ'ವಾಗಿರುವುದರಿಂದ ಪ್ರಸ್ತಾಪಿತ ಅನಧಿಕೃತ ಸಾಗುವಳಿ ಸಕ್ರಮಾತಿಗೆ ಸದಸ್ಯ ಕಾರ್ಯದರ್ಶಿಗಳ ಸಹಮತ ಇರುವುದಿಲ್ಲ. ಆದರೆ ಸದಸ್ಯ ಕಾರ್ಯದರ್ಶಿಗಳ ಅಭಿಪ್ರಾಯಕ್ಕೆ ವಿರುದ್ಧವಾಗಿ ಸಮಿತಿಯು ಬಹುಮತದ ಸದಸ್ಯ ಏಕಪಕ್ಷೀಯ ತೀರ್ಮಾನ ಕೈಗೊಂಡು ಅನಧಿಕೃತ ಸಾಗುವಳಿ ಸಕ್ರಮೀಕರಣ ಮಾಡಿದ್ದು, ಈ ಹಿನ್ನಲೆಯಲ್ಲಿ ೧೫ ಅರ್ಜಿದಾರರಿಗೆ ನೀಡಲಾದ ಭೂ ಮಂಜೂರಾತಿಯನ್ನು ಕರ್ನಾಟಕ ಭೂ ಕಂದಾಯ ನಿಯಮಗಳು ೧೯೬೬ರ ಕಲಂ ೧೦೮ (K) ರಡಿ ರದ್ದು ಪಡಿಸಲು ಹಾಗು ಸಮಿತಿಯ ತೀರ್ಮಾನದಂತೆ ಪಾವತಿಸಲಾದ ಟಿಟಿ ದಂಡ ಶುಲ್ಕ ಅರ್ಜಿದಾರರಿಗೆ ಮರು ಪಾವತಿಸಲು ಅವಕಾಶ ಕಲ್ಪಿಸಲು ಸ್ವಯಂ ಪ್ರಸ್ತಾವನೆ ಸಲ್ಲಿಸಿ ಕೋರಿದ್ದಾರೆ.
    ತಾಲೂಕಿನಲ್ಲಿ ಅರ್ಹ ಸಾಗುವಳಿದಾರರಿಗೆ ಉಂಟಾಗುತ್ತಿರುವ ಅನ್ಯಾಯ ಹಾಗು ತಾಲೂಕು ಕಛೇರಿಯಲ್ಲಿನ ಕೆಲವು ಭ್ರಷ್ಟ ಅಧಿಕಾರಿಗಳ ವಿರುದ್ಧ ಇತ್ತೀಚೆಗೆ ತಾಲೂಕು ಬಗರ್‌ಹುಕುಂ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು.
 

No comments:

Post a Comment