Sunday, April 23, 2023

ಕರಪತ್ರ ಮುದ್ರಣ ಆರೋಪ : ಶಾರದ ಅಪ್ಪಾಜಿ ವಿರುದ್ಧ ದೂರು ದಾಖಲು

ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ
    ಭದ್ರಾವತಿ, ಏ. ೨೩ : ಚುನಾವಣಾಧಿಕಾರಿಗಳ ಅನುಮತಿ ಪಡೆಯದೆ ಕರಪತ್ರಗಳನ್ನು ಮುದ್ರಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಆರೋಪಿಸಿ
    ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದಾ ಅಪ್ಪಾಜಿ ಹಾಗು ಶಿವಮೊಗ್ಗ ಕೆ.ಆರ್ ಪುರಂ ಸ್ಟಾರ್ ಪ್ರಿಂಟಿಂಗ್ ಪ್ರೆಸ್ ಮಾಲೀಕ ಅಬ್ದುಲ್ ಸಲಾಂ ವಿರುದ್ಧ ದೂರು ನೀಡಿರುವುದು ತಿಳಿದು ಬಂದಿದೆ.
ಶಾರದಾ ಅಪ್ಪಾಜಿಯವರಿಗೆ ಸಂಬಂಧಿಸಿದ ಕರಪತ್ರಗಳು ಕನ್ನಡ ಮತ್ತು ಉರ್ದು ಭಾಷೆಯಲ್ಲಿ ಪ್ರಿಂಟ್ ಮಾಡಲಾಗುತ್ತಿದ್ದು, ಈ ವೇಳೆ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದಾಗ ಕರಪತ್ರಗಳು ಲಭ್ಯವಾಗಿದೆ ಎನ್ನಲಾಗಿದೆ.
    ಕನ್ನಡ ಭಾಷೆಯಲ್ಲಿ ಹಾಗು ಉರ್ದು ಭಾಷೆಯಲ್ಲಿ ತಲಾ ೫ ಸಾವಿರ ಮುದ್ರಣ ಎಂದು ಕರಪತ್ರದಲ್ಲಿ ಕಂಡು ಬಂದಿದೆ. ಈ ಸಂಬಂಧ ಶಾರದ ಅಪ್ಪಾಜಿ ಹಾಗು ಅಬ್ದುಲ್ ಸಲಾಂ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಚುನಾವಣಾಧಿಕಾರಿಗಳು ದೂರು ದಾಖಲಿಸಿದ್ದಾರೆ.

No comments:

Post a Comment