Sunday, April 23, 2023

ಪುರಂದರದಾಸರ, ತ್ಯಾಗರಾಜರ, ಕನಕದಾಸರ ಆರಾಧನೆ : ವಿದೂಷಿ ದಿವಂಗತ ಹನುಮಂತಮ್ಮ ಸ್ವಾರಕ ಪ್ರಶಸ್ತಿ ವಿತರಣೆ

ಭದ್ರಾವತಿ ಹಳೇನಗರದ ಮಹಿಳಾ ಸೇವಾ ಸಮಾಜದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಪುರಂದರದಾಸರ, ತ್ಯಾಗರಾಜರ ಮತ್ತು ಕನಕದಾಸರ ಆರಾಧನೆ ನಡೆಯಿತು.  
    ಭದ್ರಾವತಿ, ಏ. ೨೩ : ಹಳೇನಗರದ ಮಹಿಳಾ ಸೇವಾ ಸಮಾಜದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಪುರಂದರದಾಸರ, ತ್ಯಾಗರಾಜರ ಮತ್ತು ಕನಕದಾಸರ ಆರಾಧನೆ ನಡೆಯಿತು.  
    ಪ್ರತಿವರ್ಷ ಸಂಗೀತ, ಭರತನಾಟ್ಯ, ವೀಣಾವಾದನದಲ್ಲಿ ತಾಲೂಕಿಗೆ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದವರಿಗೆ ವಿದೂಷಿ ದಿವಂಗತ ಹನುಮಂತಮ್ಮ ಸ್ವಾರಕ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ ಸಂಗೀತ ಸೀನಿಯರ್ ವಿಭಾಗದಲ್ಲಿ ಶೋಭಾ ಗಂಗರಾಜ್, ಜ್ಯೂನಿಯರ್ ವಿಭಾಗದಲ್ಲಿ ಚರಿತಾ, ವೀಣಾವಾದನದಲ್ಲಿ ವೀಣಾ, ಭರತನಾಟ್ಯ ವಿದ್ವತ್ ವಿಭಾಗದಲ್ಲಿ ಅರ್ಚನಾ, ಸೀನಿಯರ್ ವಿಭಾಗದಲ್ಲಿ ಕೃತಿಕಾ, ಜ್ಯೂನಿಯರ್ ವಿಭಾಗದಲ್ಲಿ ಕೀರ್ತನ, ರವರುಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
    ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥರಾವ್ ಅಧ್ಯಕ್ಷತೆ ವಹಿಸಿದ್ದರು. ವೀಣಾವಾದನ ಶಿಕ್ಷಕ ಸೋಮಶೇಖರ್ ವಿದೂಷಿ ದಿವಂಗತ ಹನುಮಂತಮ್ಮರವರ ಪರಿಚಯ ಮಾಡಿ ನಂತರ ಇವರ ನೇತೃತ್ವದಲ್ಲಿ ವೀಣಾವಾದನ ಕಾರ್ಯಕ್ರಮ ನಡೆಯಿತು. ವಿದೂಷಿ ಪುಷ್ಪಾ ಸುಬ್ರಮಣ್ಯಂ ನೇತೃತ್ವದಲ್ಲಿ ಪಂಚರತ್ನ ಕೃತಿ ಹಾಡುಗಾರಿಕೆ ನಡೆಸಿದರು.
       ಶಾಂತಿ ಶೇಟ್ ಸ್ವಾಗತಿಸಿದರು. ಪುಷ್ಪಾ ಸುಬ್ರಮಣ್ಯ ಪ್ರಸ್ತಾವಿಕ ನುಡಿಗಳನ್ನಾಡಿದರು. ಪುರಂದರದಾಸರ ಕುರಿತು ಚಂದನ, ತ್ಯಾಗರಾಜರ ಕುರಿತು ಶೋಭಾ ಮಾತನಾಡಿದರು. ಅನ್ನಪೂರ್ಣ ಸತೀಶ್ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment