Friday, April 7, 2023

ಆ.೧೯ರಿಂದ ೨ ದಿನ ತೇರಾಕೋಟಿ ಶ್ರೀರಾಮನಾಮಜಪದ ಯಜ್ಞ

 ಭಕ್ತರಿಗೆ ಉಚಿತವಾಗಿ ಟಿಪ್ಪಣಿ ಪುಸ್ತಕ ವಿತರಣೆ

    ಭದ್ರಾವತಿ, ಏ. ೭ : ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಹಾಗೂ ಸದ್ಗುರು ಶ್ರೀ ಬ್ರಹ್ಮಾನಂದ ಮಹಾರಾಜರ ಅನುಗ್ರಹದಿಂದ ಶ್ರೀದತ್ತಾವಧೂತ ಗುರುಗಳ ಮಾರ್ಗದರ್ಶನದಲ್ಲಿ ನಗರದಲ್ಲಿ ಆ.೧೯ ಮತ್ತು ೨೦ರಂದು ತೇರಾಕೋಟಿ ಶ್ರೀರಾಮನಾಮಜಪದ ಯಜ್ಞ ಆಯೋಜಿಸಲಾಗಿದೆ.
    ಇದರ ಅಂಗವಾಗಿ ಲೋಕ ಕಲ್ಯಾಣಾರ್ಥವಾಗಿ ಭಕ್ತರು ಪ್ರತಿನಿತ್ಯ ಶ್ರೀರಾಮನಾಮ ಜಪ ಕೈಗೊಳ್ಳುವಂತೆ ಹಾಗು ತೇರಾಕೋಟಿ ಶ್ರೀರಾಮನಾಮಜಪದ ಯಜ್ಞದಂದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
    ಪ್ರತಿನಿತ್ಯ ಜಪಸಂಖ್ಯೆ ಬರೆದುಕೂಳ್ಳಲು ಟಿಪ್ಪಣಿ ಪುಸ್ತಕವನ್ನು ಮುದ್ರಿಸಲಾಗಿದ್ದು, ಇದನ್ನು ಭಕ್ತರಿಗೆ ಉಚಿತವಾಗಿ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ: ೮೬೬೦೬೦೦೮೨೭, ೯೬೩೨೬೨೩೩೦೩ ಅಥವಾ ೯೯೮೦೩೨೩೭೩೪ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ನಾಮ ಸಾಧಕ ಸಮಿತಿ ತಿಳಿಸಿದೆ.

No comments:

Post a Comment