ಬಿ.ಎಸ್ ಅನ್ನಪೂರ್ಣಮ್ಮ
ಭದ್ರಾವತಿ, ಏ. ೨ : ಹಳೇನಗರದ ನಿವಾಸಿ ಬಿ.ಎಸ್ ಅನ್ನಪೂರ್ಣಮ್ಮ(೮೮) ಸೋಮವಾರ ರಾತ್ರಿ ನಿಧನ ಹೊಂದಿದರು. ಕುಟುಂಬಸ್ಥರು ಇವರ ಮೃತ ದೇಹ ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜಿಗೆ ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ನಗರದ ಆದಿತ್ಯ ಎಂಟರ್ಪ್ರೈಸಸ್ ಮಾಲೀಕ, ಪುತ್ರ ಗಿರೀಶ್ ಹಾಗು ೪ ಹೆಣ್ಣು ಮಕ್ಕಳು ಇದ್ದರು. ಅನ್ನಪೂರ್ಣಮ್ಮ ಶ್ರೀ ಅಕ್ಕಮಹಾದೇವಿ ಬಳಗದ ಸದಸ್ಯರಾಗಿದ್ದು, ಇವರ ನೇತ್ರಗಳನ್ನು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಗೆ ಹಾಗು ಮೃತದೇಹ ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಯಿತು. ಅನ್ನಪೂರ್ಣಮ್ಮನವರ ನಿಧನಕ್ಕೆ ಶ್ರೀ ಅಕ್ಕಮಹಾದೇವಿ ಬಳಗ ಸಂತಾಪ ಸೂಚಿಸಿದೆ.
No comments:
Post a Comment