ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ೭೫ ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಶಿಲಾವಿಗ್ರಹದ ಕೆತ್ತನೆ ಕಾರ್ಯ ಭರದಿಂದ ಸಾಗುತ್ತಿದ್ದು, ಪಾಣಿಪೀಠದ ಕಲ್ಲನ್ನು ಮಡಕಶಿರದಿಂದ ಸಾಗಿಸಲಾಗುತ್ತಿದ್ದು, ೩ನೇ ಬೃಹತ್ ಕಲ್ಲು ಮಂಗಳವಾರ ಭದ್ರಾವತಿ ನಗರವನ್ನು ಪ್ರವೇಶಿದ ಹಿನ್ನಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಭದ್ರಾವತಿ, ಮೇ. ೩೦: ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ೭೫ ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಶಿಲಾವಿಗ್ರಹದ ಕೆತ್ತನೆ ಕಾರ್ಯ ಭರದಿಂದ ಸಾಗುತ್ತಿದ್ದು, ಪಾಣಿಪೀಠದ ಕಲ್ಲನ್ನು ಮಡಕಶಿರದಿಂದ ಸಾಗಿಸಲಾಗುತ್ತಿದ್ದು, ೩ನೇ ಬೃಹತ್ ಕಲ್ಲು ಮಂಗಳವಾರ ನಗರವನ್ನು ಪ್ರವೇಶಿದ ಹಿನ್ನಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬೃಹತ್ ಗಾತ್ರದ ಕಲ್ಲನ್ನು ೧೧೨ ಚಕ್ರ ಹೊಂದಿರುವ ಲಾರಿಯಲ್ಲಿ ಪೀಠಕ್ಕೆ ಸಾಗಿಸಲಾಗುತ್ತಿದ್ದು, ನಗರದ ಬೈಪಾಸ್ ರಸ್ತೆಗೆ ಆಗಮಿಸಿದ ಲಾರಿಗೆ ಉಜ್ಜನಿಪುರ ಬಳಿ ಬಾಳೆಹೊನ್ನೂರು ರಂಭಾಪುರಿ ಶಾಖಾ ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಭಕ್ತರು ಸ್ವಾಗತಿಸಿ ವಿಶೇಷ ಪೂಜೆ ಸಲ್ಲಿಸಿದರು.
ಪಾಣಿಪೀಠದ ೧ ಮತ್ತು ೨ನೇ ಕಲ್ಲಿಗೂ ಈ ಹಿಂದೆ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಸ್ವಾಗತಿಸಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಶ್ರೀ ಜಗದ್ಗುರು ರೇಣುಕಾಚಾರ್ಯರ ಶಿಲಾವಿಗ್ರಹದ ಕತ್ತನೆ ಕಾರ್ಯ ಕೆಲವೇ ದಿನಗಳಲ್ಲಿ ಮುಕ್ತಾಯಗೊಂಡು ವಿಗ್ರಹ ಲೋಕಾರ್ಪಣೆಗೊಳ್ಳಲಿದೆ.
ಪ್ರಮುಖರಾದ ಜಿ.ಎಂ ಮೂರ್ತಿ, ಅಶೋಕ್, ಎಚ್. ಮಂಜುನಾಥ್, ಬಿ.ಎಂ ರಮೇಶ್, ಬಿ.ಎಂ ಮಂಜುನಾಥ, ಎಸ್. ವಾಗೀಶ್, ಸತೀಶ್, ಮೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
No comments:
Post a Comment