Sunday, June 4, 2023

ಜೂ.೫ ರಿಂದ ಎನ್‌ಎಸ್‌ಎಸ್ ಶಿಬಿರ

    ಭದ್ರಾವತಿ, ಜೂ. ೪ : ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ-೧ ಮತ್ತು ೨ರ ವಾರ್ಷಿಕ ವಿಶೇಷ ಶಿಬಿರ ಜೂ.೫ರಿಂದ ೧೧ರವರೆಗೆ ಬಾಳೆಮಾರನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ.
    ಜೂ.೫ರ ಸಂಜೆ ೬ ಗಂಟೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಂ ನಾಸಿರ್‌ಖಾನ್ ಅಧ್ಯಕ್ಷತೆ ವಹಿಸಲಿದ್ದಾರೆ.
    ಕಾಲೇಜು ಶಿಕ್ಷಣ ಇಲಾಖೆ ಶಿವಮೊಗ್ಗ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಓಂಪ್ರಕಾಶ್ ರಾಜೋಳೆ, ಕುವೆಂಪು ವಿಶ್ವ ವಿದ್ಯಾಲಯದ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಅರಳಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಕುಮಾರ್, ಉಪಾಧ್ಯಕ್ಷೆ ಲತಾ, ಸದಸ್ಯರಾದ ಸೂರ್ಯನಾಯ್ಕ, ಶಿವಕುಮಾರ್, ಎಸ್. ಉತ್ತರೇಶ, ಭಾಗ್ಯಮ್ಮ, ತಿಪ್ಪಮ್ಮ, ಬಿ. ಸುರೇಶ್, ದೀಪ, ಲಕ್ಷ್ಮೀಬಾಯಿ, ಬಿ. ರಾಜು, ಕಾವೇರಿಬಾಯಿ, ಕೆ. ರಘುಪ್ರಸಾದ್, ಯಶೋಧಬಾಯಿ, ಪಿಡಿಓ ರಾಜಪ್ಪ, ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ರವಿಕುಮಾರ್, ಮುಖ್ಯ ಶಿಕ್ಷಕ ಕೆ.ಎನ್ ಮಂಜುನಾಥ್, ಕಾಲೇಜಿನ ಪ್ರಾಧ್ಯಾಪಕರಾದ ಡಾ. ಶೈಲಜಾ ಸಿದ್ದಪ್ಪ ಹೊಸಳ್ಳೆರ, ಉಷಾದೇವಿ, ವ್ಯಾಸನಾಯ್ಕ, ಡಾ. ಟಿ.ಜಿ ಉಮಾ, ಬಿ. ಗುರುಪ್ರಸಾದ್, ಆರ್. ವೆಂಕಟೇಶ್, ಡಾ. ಆರ್. ಸೀಮಾ, ಪತ್ರಕರ್ತರಾದ ಬಸವರಾಜ್ ಮತ್ತು ಅನಂತಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.

No comments:

Post a Comment