ಸಜ್ಜನ್ ಜೈನ್
ಭದ್ರಾವತಿ: ನಗರದ ಜೈನ್ ರುದ್ರಭೂಮಿ ಸಂಸ್ಥಾಪಕ ದಿ.ಪಾರಸ್ಮಲ್ ಜೈನ್ರವರ ಪುತ್ರ ಸಜ್ಜನ್ ಜೈನ್(೪೯) ಭಾನುವಾರ ನಿಧನ ಹೊಂದಿದರು.
ಪತ್ನಿ ಗೀತಾ ಸಜ್ಜನ್ ಜೈನ್ ಹಾಗು ೩ ಪತ್ರಿಯರು ಇದ್ದರು. ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇವರ ಅಂತ್ಯಕ್ರಿಯೆ ಸೋಮವಾರ ಜೈನ್ ರುದ್ರಭೂಮಿಯಲ್ಲಿ ಸೋಮವಾರ ನೆರವೇರಿತು.
ಇವರ ನಿಧನಕ್ಕೆ ಕಾಂಚನಾ ಹೋಟೆಲ್ ವಾಗೀಶ್, ಜಿಕ್ಲೈನ್ ನಿವಾಸಿಗಳು, ಜೈನ್ ಸಮುದಾಯದ ಮುಖಂಡರು ಸಂತಾಪ ಸೂಚಿಸಿದ್ದಾರೆ.
No comments:
Post a Comment