Wednesday, November 29, 2023

ಎಲ್‌ಐಸಿ ಕಚೇರಿಯಲ್ಲಿ ಕಡಿಮೆ ಅವಧಿಯ `ಜೀವನ ಉತ್ಸವ' ಪಾಲಿಸಿಗೆ ಚಾಲನೆ

ಭದ್ರಾವತಿ ಉಂಬ್ಳೆಬೈಲು ರಸ್ತೆಯಲ್ಲಿರುವ ಜೀವ ವಿಮಾ ನಿಗಮದ ಶಾಖಾ ಕಚೇರಿಯಲ್ಲಿ ನೂತನ `ಎಲ್‌ಐಸಿಯ ಜೀವನ ಉತ್ಸವ' ಪಾಲಿಸಿಗೆ ಬುಧವಾರ ಚಾಲನೆ ನೀಡಲಾಯಿತು.
    ಭದ್ರಾವತಿ: ನಗರದ ಉಂಬ್ಳೆಬೈಲು ರಸ್ತೆಯಲ್ಲಿರುವ ಜೀವ ವಿಮಾ ನಿಗಮದ ಶಾಖಾ ಕಚೇರಿಯಲ್ಲಿ ನೂತನ `ಎಲ್‌ಐಸಿಯ ಜೀವನ ಉತ್ಸವ' ಪಾಲಿಸಿಗೆ ಬುಧವಾರ ಚಾಲನೆ ನೀಡಲಾಯಿತು.
    ಶಾಖಾ ಪ್ರಬಂಧಕ ಮುರಳೀಧರ್ ಮಾತನಾಡಿ,  ಜೀವನ ಉತ್ಸವ ಪಾಲಿಸಿ ಮಹತ್ವದ ಯೋಜನೆಯಾಗಿದೆ. ಕಡಿಮೆ ಅವಧಿಯ ಪಾಲಿಸಿಯನ್ನು ಜನರು ಅಪೇಕ್ಷಿಸುತ್ತಿದ್ದರು. ಇದೀಗ ಜನರ ಅಪೇಕ್ಷೆ ಈ ಪಾಲಿಸಿ ಈಡೇರಿಸಿದೆ ಎಂದರು.
    ಶಾಖಾ ಕಛೇರಿಯಲ್ಲಿ ಯೋಜನೆಗೆ ಚಾಲನೆ ನೀಡಿದ ೨ ಗಂಟೆ ಅವಧಿಯಲ್ಲಿ ೬ ಜನರ ನೋಂದಣಿಯಾಗಿದೆ. ಈ ಪಾಲಿಸಿ ಕಡಿಮೆ ಅವಧಿಯನ್ನು ಬಯಸುವ ಜನರಿಗೆ ಬಹುಮುಖ್ಯ ಪಾಲಿಸಿಯಾಗಿದೆ. ಈ ಪಾಲಿಸಿಯ ಸಂದಾಯ ಅವಧಿ ೫ ರಿಂದ ೧೬ ವರ್ಷವಾಗಿರುತ್ತದೆ ಎಂದ ತಿಳಿಸಿದರು.
    ಆಡಳಿತಾಧಿಕಾರಿ ನಾಗರಾಜ್, ಬಾಬು ಸೇಠ್ ನಾಯಕ್, ಅಭಿವೃದ್ಧಿ ಅಧಿಕಾರಿಗಳಾದ ರಾಜೇಶ್ ಕೆ ಐನಾಪುರ್, ಲೋಹಿ ಕೆ ನಾಯರ್, ನಿಖಿಲೇಶ್ ಸೇರಿದಂತೆ ಕಛೇರಿ ಸಿಬ್ಬಂದಿಗಳು, ವಿಮಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
    ಜೀವನ ಉತ್ಸವ ಯೋಜನೆಯ ಮೊದಲ ಪ್ರತಿನಿಧಿಗಳಾದ ಕೆ.ಎಚ್ ಮಂಜುನಾಥ ನಾಯ್ಕ, ಸುಬ್ರಮಣಿಯವರನ್ನು ಗೌರವಿಸಿ, ಅಭಿನಂದಿಸಲಾಯಿತು.

No comments:

Post a Comment