Tuesday, December 5, 2023

ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ಉದ್ಯೋಗಿ ರೇವಣ್ಣರಿಗೆ ಗೌರವ ಡಾಕ್ಟರೇಟ್

ಉದ್ಯಮಿ, ಸಮಾಜ ಸೇವಕ ರೇವಣ್ಣ ಅವರಿಗೆ ಏಷ್ಯಾ ಇಂಟರ್‌ನ್ಯಾಷನಲ್ ಕಲ್ಟರ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಭದ್ರಾವತಿ: ಉದ್ಯಮಿ, ಸಮಾಜ ಸೇವಕ ರೇವಣ್ಣ ಅವರಿಗೆ ಏಷ್ಯಾ ಇಂಟರ್‌ನ್ಯಾಷನಲ್ ಕಲ್ಟರ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ತಮಿಳುನಾಡು ಹೊಸೂರು ಕ್ಲಾರೆಸ್ಟ ಹೋಟೆಲ್‌ನಲ್ಲಿ ನಡೆದ ಪದವಿ ವಿತರಣಾ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ವಿಜಯನ್ ಆಕಾಡೆಮಿ ಸಂಸ್ಥಾಪಕ ಮತ್ತು ಮುಖ್ಯ ತರಬೇತಿದಾರ ಮಾಸ್ಟರ್ ವಿ. ಬಾಬು ವಿಜಯನ್, ಐಎನ್‌ಟಿಯುಸಿ ತಮಿಳುನಾಡು ಕಾರ್ಯಾಧ್ಯಕ್ಷ ಮಾಜಿ ಶಾಸಕ ಡಾ. ಕೆ.ಎ ಮನೋಕರಣ್, ಆಂಧ್ರ ಪ್ರದೇಶದ ನಿವೃತ್ತ ಸಹಾಯಕ ನ್ಯಾಯಾಧೀಶ ಡಾ. ಜೆ. ಹರಿದಾಸ್, ಚಿಕ್ಕಮ್ಯಾಗೆರಿ ಪುಣ್ಯಕ್ಷೇತ್ರ ಇಟಗಿ ಭೂ ಕೈಲಾಸ ಮೇಲುಗದ್ದಿಗೆ ಹಿರೇಮಠ ಸಂಸ್ಥಾನದ ಶ್ರೀ ಗುರುಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಡಾ. ಎಂ. ರಾಜಗೋಪಾಲನ್, ಟಿ. ತ್ಯಾಗರಾಜು, ಮಂಜುಳ, ಶ್ರೀ ಬಸವ ಯೋಗಿ ಗುರೂಜಿ ಮತ್ತು ಡಾ. ರವಿಚಂದ್ರನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ರೇವಣ್ಣ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರರಾಗಿದ್ದು, ಅಲ್ಲದೆ ಹಿರಿಯ ವಾಲಿಬಾಲ್ ಕೀಡಾಪಟು. ಈ ಹಿಂದೆ ಕಾರ್ಮಿಕ ಸಂಘದಲ್ಲಿ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು. ಇವರು ನಿವೃತ್ತಿ ಹೊಂದಿದ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದು, ವಿದೇಶದಲ್ಲಿ ನೆಲೆಸಿರುವ ಇವರ ಪುತ್ರರಾದ ಆರ್. ವಿನೋದ್‌ಕುಮಾರ್ ಜಯಕೀರ್ತಿ ಮತ್ತು ವಿನಯ್‌ಕುಮಾರ್ ಜಯಕೀರ್ತಿಯವರು ಆರಂಭಿಸಿರುವ ಸಾಫ್ಟ್‌ವೇರ್ ಕಂಪನಿಯ ಬೆಂಗಳೂರು ಶಾಖೆಯ ನಿರ್ದೇಶಕರಾಗಿದ್ದಾರೆ. ಕಂಪನಿ ವ್ಯವಹಾರದ ಜೊತೆಗೆ ಜಯಕೀರ್ತಿ ಚಾರಿಟಬಲ್ ಟ್ರಸ್ಟ್ ಮೂಲಕ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. 
  ಇವರು ಕೆ.ಆರ್ ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಹಾಲೇಗೌಡರ ಸುಪುತ್ರ ರಾಗಿದ್ದಾರೆ. ಇವರನ್ನು ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಹಾಗು ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಅಭಿನಂದಿಸಿದ್ದಾರೆ. 

No comments:

Post a Comment