ಸ್ನೇಕ್ ಅಪ್ಪು ತಂಡದಿಂದ ಸೆರೆ : ಅರಣ್ಯಕ್ಕೆ ಸ್ಥಳಾಂತರ
ಭದ್ರಾವತಿ ಬೈಪಾಸ್ ರಸ್ತೆಯ ಬುಳ್ಳಾಪುರದ ಪೆಟ್ರೋಲ್ ಬಂಕ್ ಒಳಗೆ ಅವಿತುಕೊಂಡಿದ್ದ ಬೃಹತ್ ಹೆಬ್ಬಾವು ಸ್ನೇಕ್ ಅಪ್ಪು ಮತ್ತು ತಂಡದವರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಭದ್ರಾವತಿ: ನಗರದ ಬೈಪಾಸ್ ರಸ್ತೆಯ ಬುಳ್ಳಾಪುರದ ಪೆಟ್ರೋಲ್ ಬಂಕ್ ಒಳಗೆ ಅವಿತುಕೊಂಡಿದ್ದ ಬೃಹತ್ ಹೆಬ್ಬಾವು ಸ್ನೇಕ್ ಅಪ್ಪು ಮತ್ತು ತಂಡದವರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಪೆಟ್ರೋಲ್ ಬಂಕ್ ಸಿಬ್ಬಂದಿ ಕರೆ ಮಾಡಿದ ತಕ್ಷಣ ಉಜ್ಜನಿಪುರ ನಿವಾಸಿ ಸ್ನೇಕ್ ಅಪ್ಪು ಮತ್ತು ತಂಡದವರು ಸ್ಥಳಕ್ಕೆ ಆಗಮಿಸಿ ಸುಮಾರ 8 ಅಡಿ ಉದ್ದ ಹಾಗು 13.5 ಕೆ.ಜಿ ತೂಕದ ಬೃಹತ್ ಗಾತ್ರದ ಹೆಬ್ಬಾವು ಸೆರೆ ಹಿಡಿದಿದ್ದಾರೆ . ನಂತರ ಸುರಕ್ಷಿತವಾಗಿ ಉಂಬ್ಳೆಬೈಲು ಅರಣ್ಯಕ್ಕೆ ಬಿಡಲಾಗಿದ್ದು, ಪೆಟ್ರೊಲ್ ಬಂಕ್ ಸಿಬ್ಬಂದಿ ನಿಟ್ಟುಸಿರು ಬಿಡುವಂತಾಗಿದೆ.
No comments:
Post a Comment