Wednesday, September 25, 2024

ಸ್ವಚ್ಛ ಭಾರತ ಅಭಿಯಾನ : ಶಾಲಾ ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ "ಸ್ವಚ್ಛತಾ ಹಿ ಸೇವಾ-೨೦೨೪ ಅಭಿಯಾನ" ಅಂಗವಾಗಿ ತಾಲೂಕಿನ ಶಾಲಾ ಮಕ್ಕಳಿಗೆ  'ನನ್ನ ಕನಸಿನ ಸ್ವಚ್ಛ ಭದ್ರಾವತಿ' ಎಂಬ ವಿಷಯ ಕುರಿತು ಕುಳಿತು ಚಿತ್ರ ಬರೆಯುವ ಸ್ಪರ್ಧೆ ವಿಐಎಸ್‌ಎಲ್ ಕ್ರೀಡಾಂಗಣ ಆಯೋಜಿಸಲಾಗಿತ್ತು.
    ಭದ್ರಾವತಿ:  ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ "ಸ್ವಚ್ಛತಾ ಹಿ ಸೇವಾ-೨೦೨೪ ಅಭಿಯಾನ" ಅಂಗವಾಗಿ ತಾಲೂಕಿನ ಶಾಲಾ ಮಕ್ಕಳಿಗೆ  'ನನ್ನ ಕನಸಿನ ಸ್ವಚ್ಛ ಭದ್ರಾವತಿ' ಎಂಬ ವಿಷಯ ಕುರಿತು ಕುಳಿತು ಚಿತ್ರ ಬರೆಯುವ ಸ್ಪರ್ಧೆ ವಿಐಎಸ್‌ಎಲ್ ಕ್ರೀಡಾಂಗಣ ಆಯೋಜಿಸಲಾಗಿತ್ತು.
    ಕಾರ್ಖಾನೆಯ ಕಾರ್ಯಪಾಲಕ ನಿರ್ದೆಶಕ ಬಿ.ಎಲ್ ಚಂದ್ವಾನಿ ಸ್ಪರ್ಧೆ ಉದ್ಘಾಟಿಸಿ ಆಂಗ್ಲಭಾಷೆಯಲ್ಲಿ ಸ್ವಚ್ಛತೆಯ ಪ್ರತಿಜ್ಞೆಯನ್ನು ಬೋಧಿಸಿದರು. ಸಾರ್ವಜನಿಕ ಸಂಪರ್ಕ ಇಲಾಖೆ ಮಹಾಪ್ರಬಂಧಕ ಎಲ್. ಪ್ರವೀಣ್ ಕುಮಾರ್ ಕನ್ನಡದಲ್ಲಿ  ಬೋಧಿಸಿದರು. 
ಬಿ.ಎಲ್ ಚಂದ್ವಾನಿ ಮಾತನಾಡಿ, ನಮ್ಮ ದೈನಂದಿನ ಜೀವನದಲ್ಲಿ ಸ್ವಚ್ಛತೆಯ ಅಭ್ಯಾಸ ಅಳವಡಿಸಿಕೊಳ್ಳಬೇಕು ಮತ್ತು ಇತರರಿಗೂ ಈ ಅಭ್ಯಾಸ ರೂಢಿಸಿಕೊಳ್ಳಲು ಪ್ರೇರೇಪಿಸಬೇಕು ಎಂದರು.
    ಕಾರ್ಖಾನೆಯ ಪರಿಸರ ನಿರ್ವಹಣಾ ವಿಭಾಗದ ಮಹಾಪ್ರಬಂಧಕ ಮುತ್ತಣ್ಣ ಸುಬ್ಬರಾವ್ ಮಾತನಾಡಿ, ಸ್ವಚ್ಛತೆಯು ನಮ್ಮ ದೈನಂದಿನ ಜೀವನದ ಭಾಗವಾಗಬೇಕು ಎಂದರು.
    ಮಾರುಕಟ್ಟೆ ವಿಭಾಗದ ಮಹಾಪಬಂಧಕ ಹರಿಕೃಷ್ಣ ಗುಡೆ, ಪರಿಸರ ನಿರ್ವಹಣಾ ವಿಭಾಗದ ಉಪ ಮಹಾಪಬಂಧಕ ವಿಕಾಸ್ ಬಸೇರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ನೂರಕ್ಕೂ ಹೆಚ್ಚು ಸಸಿಗಳನ್ನು ಆಸಕ್ತ ಪೋಷಕರಿಗೆ ವಿತರಣೆ ಮಾಡಲಾಯಿತು. ತಾಲೂಕಿನ ೧ ರಿಂದ ೧೦ನೇ ತರಗತಿವರೆಗಿನ ಒಟ್ಟು ೪೨೫ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮಲ್ಲಿನ ಪರಿಸರದ ಮೇಲಿನ ಅಭಿಮಾನ ಹಾಗು ಪ್ರತಿಭೆಯನ್ನು ಕಲಾತ್ಮಕ ಚಿತ್ರಣದ ಮೂಲಕ ಪ್ರದರ್ಶಿಸಿದರು.  
 

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ "ಸ್ವಚ್ಛತಾ ಹಿ ಸೇವಾ-೨೦೨೪ ಅಭಿಯಾನ" ಅಂಗವಾಗಿ ತಾಲೂಕಿನ ಶಾಲಾ ಮಕ್ಕಳಿಗೆ  'ನನ್ನ ಕನಸಿನ ಸ್ವಚ್ಛ ಭದ್ರಾವತಿ' ಎಂಬ ವಿಷಯ ಕುರಿತು ಕುಳಿತು ಚಿತ್ರ ಬರೆಯುವ ಸ್ಪರ್ಧೆ ವಿಐಎಸ್‌ಎಲ್ ಕ್ರೀಡಾಂಗಣ ಆಯೋಜಿಸಲಾಗಿತ್ತು. ನೂರಕ್ಕೂ ಹೆಚ್ಚು ಸಸಿಗಳನ್ನು ಆಸಕ್ತ ಪೋಷಕರಿಗೆ ವಿತರಣೆ ಮಾಡಲಾಯಿತು. 

No comments:

Post a Comment