Thursday, October 17, 2024

ಪ್ರಗತಿಪರ ರೈತ ಶ್ರೀಧರ್ ಜಮೀನಿನಲ್ಲಿ ಭೂಮಿ ಹುಣ್ಣಿಮೆ ಆಚರಣೆ

ಮಲೆನಾಡಿನ ರೈತರ ನೆಚ್ಚಿನ ಹಬ್ಬ ಭೂಮಿ ಹುಣ್ಣಿಮೆ ಭದ್ರಾವತಿ ತಾಲೂಕಿನಾದ್ಯಂತ ಕೆಲವು ರೈತ ಕುಟುಂಬಗಳು ಸಂಪ್ರದಾಯದಂತೆ ಆಚರಿಸಿಕೊಂಡು ಬರುತ್ತಿವೆ. ಪ್ರಗತಿಪರ ರೈತ, ಭಂಡಾರ ಹಳ್ಳಿ ನಿವಾಸಿ ಶ್ರೀಧರ್‌ರವರು ತಮ್ಮ ಜಮೀನಿನಲ್ಲಿ ಗುರುವಾರ ಭೂಮಿ ಹುಣ್ಣಿಮೆ ಆಚರಿಸಿದರು. 
    ಭದ್ರಾವತಿ: ಮಲೆನಾಡಿನ ರೈತರ ನೆಚ್ಚಿನ ಹಬ್ಬ ಭೂಮಿ ಹುಣ್ಣಿಮೆ ತಾಲೂಕಿನಾದ್ಯಂತ ಕೆಲವು ರೈತ ಕುಟುಂಬಗಳು ಸಂಪ್ರದಾಯದಂತೆ ಆಚರಿಸಿಕೊಂಡು ಬರುತ್ತಿವೆ. ಪ್ರಗತಿಪರ ರೈತ, ಭಂಡಾರ ಹಳ್ಳಿ ನಿವಾಸಿ ಶ್ರೀಧರ್‌ರವರು ತಮ್ಮ ಜಮೀನಿನಲ್ಲಿ ಗುರುವಾರ ಭೂಮಿ ಹುಣ್ಣಿಮೆ ಆಚರಿಸಿದರು. 
    ಶ್ರೀಧರ್‌ರವರು ಭಂಡಾರಹಳ್ಳಿಯಲ್ಲಿರುವ ತಮ್ಮ ಜಮೀನಿನಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆದು ಅಸಾಧಾರಣ ಸಾಧನೆಗಳನ್ನು ಮಾಡಿದ್ದು, ಇವರ ಸಾಧನೆಗೆ ಹಲವಾರು ಪ್ರಶಸ್ತಿ, ಬಿರುದುಗಳು ಸಂದಿವೆ. 
    ಈ ಬಾರಿ ಭೂಮಿ ಹುಣ್ಣಿಮೆ ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಟ್ಟಡ ಸಮಿತಿ ಅಧ್ಯಕ್ಷೆ, ಸಾಹಿತಿ, ನಿವೃತ್ತ ಉಪನ್ಯಾಸಕಿ ಎಮೆರಿಟಸ್ ಡಾ. ವಿಜಯದೇವಿ ಹಾಗು ಕನ್ನಡ ಸಾಹಿತ್ಯ, ಸಾಂಸ್ಕೃತಿ ವೇದಿಕೆ ತಾಲೂಕು ಅಧ್ಯಕ್ಷ, ಬಗರ್ ಹುಕುಂ ಸಮಿತಿ ಸದಸ್ಯೆ ಎಂ.ಎಸ್ ಸುಧಾಮಣಿ ಪಾಲ್ಗೊಂಡು ಹಬ್ಬದ ಸಂಭ್ರಮ ಹಂಚಿಕೊಂಡರು. ಪ್ರಗತಿಪರ ರೈತ ಶ್ರೀಧರ್ ಕುಟುಂಬ ವರ್ಗದವರು ಉಪಸ್ಥಿತರಿದ್ದರು. 

No comments:

Post a Comment