ಭದ್ರಾವತಿ: ನಗರದ ಡಾ. ರಾಜಕುಮಾರ್ ರಸ್ತೆಯಲ್ಲಿರುವ ಶ್ರೀ ಭವಾನಿ ಸಂಕೀರ್ಣದಲ್ಲಿ ಸೋಮವಾರ ನೂತನ ಮರಾಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
. ಬೆಂಗಳೂರು ಗವಿಪುರಂ ಶ್ರೀ ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿದ್ದರು. ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಜಾಮೀನುಸಾಲ, ಗೋಲ್ಡ್ ಲೋನ್, ಹಿರಿಯ ನಾಗರಿಕರ ಹಾಗೂ ಮಹಿಳೆಯರ ಠೇವಣಿ ಹಣಕ್ಕೆ ಹೆಚ್ಚಿನ ಬಡ್ಡಿದರ ನೀಡುವುದು, ಆರ್.ಟಿ.ಜಿ.ಎಸ್, ನೆಫ್ಟ್ ನಂತಹ ಎಲ್ಲಾ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ.
ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಕಾಶ್ ಆರ್. ಪಾಗೋಜಿ, ಸೊಸೈಟಿ ಅಧ್ಯಕ್ಷ ಲೋಕೇಶ್ವರರಾವ್ ದೊಂಬಾಳೆ, ಸೊಸೈಟಿ ಉಪಾಧ್ಯಕ್ಷ ಆರ್. ನಾಗರಾಜ್ರಾವ್ ಸಿಂಘಾಡೆ, ನಿರ್ದೇಶಕರಾದ ರಾಮಾನಾಥ ವಿ ಬರ್ಗೆ, ಕೃಷ್ಣೋಜಿರಾವ್ ಗಾಯಕ್ವಾಡ್, ಗೀತಾಬಾಯಿ, ಭಾರತಿಗಾಯಕ್ವಾಡ್, ಬಸಂತರಾವ್ ದಾಳೆ, ಸುರೇಶ್ ಎಸ್. ಬೋಸ್ಲೆ, ರಂಗೋಜಿರಾವ್ ಬಂಡಗಾರ್, ಬಿ. ಹಾಲೋಜಿರಾವ್, ಟಿ.ಆರ್ ಭೀಮರಾವ್, ಎಸ್. ಶಾಂತಕುಮಾರ್ ಗಾಯಕ್ವಾಡ್, ಪರಶುರಾಮ್ರಾವ್ ಜಾಧವ್, ಎಚ್.ಡಿ ಮಹೇಶ್ರಾವ್, ಮಂಜುನಾಥರಾವ್ ಮೋರೆ ಮತ್ತು ಜಿ.ವೈ ರಂಗನಾಥರಾವ್ ಹಜಾರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ ನಗರದ ಡಾ. ರಾಜಕುಮಾರ್ ರಸ್ತೆಯಲ್ಲಿರುವ ಶ್ರೀ ಭವಾನಿ ಸಂಕೀರ್ಣದಲ್ಲಿ ಸೋಮವಾರ ನೂತನ ಮರಾಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
No comments:
Post a Comment