ಭದ್ರಾವತಿ: ರಾತ್ರೋರಾತ್ರಿ ಮನೆ ಮುಂದೆ ಇಡಲಾಗಿದ್ದ ಸುಮಾರು ೨ ಕ್ವಿಂಟಾಲ್ ಅಡಕೆ ಕಳವು ಮಾಡಿರುವ ಘಟನೆ ತಾಲೂಕಿನ ಸಿದ್ಲಿಪುರ ಗ್ರಾಮದಲ್ಲಿ ನಡೆದಿದೆ.
ಅಮಿತ್ ಎಂಬುವವರು ತಮ್ಮ ತೋಟದಲ್ಲಿ ಬೆಳೆದ ಅಡಕೆ ಮಾರಾಟಕ್ಕೆ ಸಿದ್ದಗೊಳಿಸಿ ಒಟ್ಟು ೭ ಚೀಲಗಳಲ್ಲಿ ತುಂಬಿ ಇಡಲಾಗಿದ್ದು, ಈ ಪೈಕಿ ೩ ಚೀಲಗಳು ನಾಪತ್ತೆಯಾಗಿವೆ. ಸುಮಾರು ೨ ಕ್ವಿಂಟಾಲ್ ಅಡಕೆ ಕಳವು ಮಾಡಲಾಗಿದೆ ಎಂದು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
No comments:
Post a Comment