Sunday, November 3, 2024

ಕ್ರೈಸ್ತ ಧರ್ಮದ ಸಮಾಧಿ ಹಬ್ಬ

ಭದ್ರಾವತಿ ನಗರದ ಬೈಪಾಸ್ ರಸ್ತೆ, ಮಿಲ್ಟ್ರಿಕ್ಯಾಂಪ್ ಸಮೀಪದಲ್ಲಿರುವ ಕ್ರೈಸ್ತರ ಸಮಾಧಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಸಮಾಧಿ ಹಬ್ಬ ಕ್ರೈಸ್ತ ಭಕ್ತಾದಿಗಳಿಂದ ಆಚರಿಸಲಾಯಿತು. 
    ಭದ್ರಾವತಿ : ನಗರದ ಬೈಪಾಸ್ ರಸ್ತೆ, ಮಿಲ್ಟ್ರಿಕ್ಯಾಂಪ್ ಸಮೀಪದಲ್ಲಿರುವ ಕ್ರೈಸ್ತರ ಸಮಾಧಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಸಮಾಧಿ ಹಬ್ಬ ಕ್ರೈಸ್ತ ಭಕ್ತಾದಿಗಳಿಂದ ಆಚರಿಸಲಾಯಿತು. 
    ವಿಶ್ವ ಕ್ರೈಸ್ತ ಕ್ಯಾಥೋಲಿಕ್ ಧರ್ಮ ಸಭೆ ನಿರ್ಣಯದಂತೆ ನ.೨ರಂದು ಮೃತರ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕ್ರೈಸ್ತ ಧರ್ಮದ ಕುಟುಂಬಗಳಲ್ಲಿ ಮೃತರಾದ ಸದಸ್ಯರಿಗಾಗಿ ಅಂತ್ಯ ಕ್ರಿಯೆ ಸಲ್ಲಿಸಿದ ಸಮಾಧಿಯ ಸ್ಥಳದಲ್ಲಿ ಭಕ್ತರು ಅಂದು ಸೇರಿ ಧರ್ಮ ಗುರುಗಳೊಂದಿಗೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಪ್ರಾರ್ಥಿಸಲಾಗುವುದು. 
ಸಮಾಧಿಗಳ ಮೇಲೆ ಬೆಳೆದಿರುವ ಗಿಡ, ಪೊದೆಗಳನ್ನು ತೆಗೆದು, ಸ್ವಚ್ಚಗೊಳಿಸಿ ಸುಣ್ಣ ಬಣ್ಣಗಳನ್ನು ಹಚ್ಚಿ, ಹೂವಿನಿಂದ ಅಲಂಕರಿಸಿ, ಸಮಾಧಿಗಳ ಮೇಲೆ ಕ್ಯಾಂಡಲ್‌ಗಳನ್ನು ಹಚ್ಚಿ ನಿಧನರಾದ ಸಕಲರಿಗಾಗಿ ಪ್ರಾರ್ಥಿಸಲಾಯಿತು. 
    ಹಳೇ ನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದ ಧರ್ಮ ಗುರುಗಳಾದ ಫಾದರ್ ಸ್ಟೀವನ್ ಡೇಸಾ, ನ್ಯೂಟೌನ್ ಅಮಲೋದ್ಭವಿ ಮಾತೆ ಧರ್ಮ ಕೇಂದ್ರದ ಗುರುಗಳಾದ ಫಾದರ್ ಲ್ಯಾನ್ಸಿ ಡಿಸೋಜ, ಕಾಗದನಗರದ ಸೈಂಟ್ ಜೋಸೆಫ್ ದೇವಾಲಯ ಫಾದರ್ ಕ್ರಿಸ್ತುರಾಜ್, ಹಿರಿಯೂರು ಧರ್ಮ ಕೇಂದ್ರದ ಗುರುಗಳಾದ ಫಾದರ್ ಸಂತೋಷ್ ಪರೇರ, ನೆರೆಯ ಧರ್ಮ ಕೇಂದ್ರದ ಗುರುಗಳು, ಧರ್ಮ ಭಗಿನಿಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.

No comments:

Post a Comment