Monday, December 2, 2024

ಕೃಷ್ಣಾಜಿ ರಾವ್ ನಿಧನ

ಕೃಷ್ಣಾಜಿ ರಾವ್ 
    ಭದ್ರಾವತಿ: ತಾಲೂಕಿನ ತಡಸ ಗ್ರಾಮದ ನಿವಾಸಿ, ಮರಾಠ ಸಮಾಜದ ಮುಖಂಡರಾದ ಕೃಷ್ಣಾಜಿ ರಾವ್ ನಿಧನ ಹೊಂದಿದರು. 
    ಇವರ ಅಂತ್ಯಕ್ರಿಯೆ ತಡಸ ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ಸೋಮವಾರ ಸಂಜೆ ನೆರವೇರಿತು. ಕೃಷ್ಣಾಜಿ ರಾವ್‌ರವರು ಶಿವಮೊಗ್ಗ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಸಂಘದ ನಿರ್ದೇಶಕ ಟಿ.ಕೆ ರಮೇಶ್‌ರವರ ತಂದೆಯಾಗಿದ್ದಾರೆ. ಇವರ ನಿಧನಕ್ಕೆ ಮರಾಠ ಸಮಾಜದ ಪ್ರಮುಖರು, ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ. 

No comments:

Post a Comment