Wednesday, December 25, 2024

ಜ.೧ರಂದು ಕೋರೆಗಾಂವ್ ವಿಜಯೋತ್ಸವ ಆಚರಣೆ : ದಲಿತ ಸಂಘಟನೆಗಳ ಸಭೆ

ನೂತನ ವರ್ಷ ಆರಂಭದ ಮೊದಲ ದಿನ ಕೋರೆಗಾಂವ್ ವಿಜಯೋತ್ಸವ ಆಚರಿಸುವ ಸಂಬಂಧ ಭದ್ರಾವತಿ ನಗರದ ವಿವಿಧ ದಲಿತ ಸಂಘಟನೆಗಳು ಸಭೆ ನಡೆಸಿ ಚರ್ಚಿಸಿದವು. 
    ಭದ್ರಾವತಿ: ನೂತನ ವರ್ಷ ಆರಂಭದ ಮೊದಲ ದಿನ ಕೋರೆಗಾಂವ್ ವಿಜಯೋತ್ಸವ ಆಚರಿಸುವ ಸಂಬಂಧ ನಗರದ ವಿವಿಧ ದಲಿತ ಸಂಘಟನೆಗಳು ಸಭೆ ನಡೆಸಿ ಚರ್ಚಿಸಿದವು. 
    ಹೊಲಯ ಮಾದಿಗ ಸಮನ್ವಯ ಸಮಿತಿ ರಚಿಸಿಕೊಂಡು ಜ.೧ರಂದು ವಿಜಯೋತ್ಸವ ನಡೆಸುವ ಮೂಲಕ ಯಶಸ್ವಿಗೊಳಿಸಲು ಹಾಗು ಮುಂದಿನ ದಿನಗಳಲ್ಲಿ ಒಳಮೀಸಲಾತಿಗಾಗಿ ಜಂಟಿ ಹೋರಾಟ ನಡೆಸಲು ನಿರ್ಣಯ ಕೈಗೊಳ್ಳಲಾಯಿತು. 
    ಸಭೆಯಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರುಗಳಾದ  ಶಿವಬಸಪ್ಪ, ಸತ್ಯ ಭದ್ರಾವತಿ, ಸುರೇಶ್, ಕುಬೇಂದ್ರಪ್ಪ, ಪುಟ್ಟರಾಜ, ಜಯರಾಮ್, ಧರ್ಮರಾಜ್, ಕೃಷ್ಣ, ಮಹೇಶ್, ಜಿಂಕ್‌ಲೈನ್ ಮಣಿ, ಮೂರ್ತಿ, ಸಿ. ಚನ್ನಪ್ಪ, ಜಗದೀಶ್, ಎಸ್. ಉಮಾ, ಗಂಗಾಧರ್, ಕೂಡ್ಲಿಗೆರೆ ರಮೇಶ್, ನಂಜಾಪುರ ರವಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

No comments:

Post a Comment