Thursday, December 26, 2024

ನವಚೇತನ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ

ಭದ್ರಾವತಿ ನಗರಸಭೆ ವ್ಯಾಪ್ತಿಯ ಕಡದಕಟ್ಟೆ ನವಚೇತನ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಸಿದರು.
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಕಡದಕಟ್ಟೆ ನವಚೇತನ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಸಿದರು.
    ವಾರ್ಷಿಕೋತ್ಸವದಲ್ಲಿ ರೈತ ಅಶೋಕ್, ಮಾಜಿ ಸೈನಿಕ ದೇವರಾಜು ಮತ್ತು ನವಚೇತನ ಶಾಲೆಯ ನಿವೃತ್ತ ಶಿಕ್ಷಕ ಎಂ. ಚನ್ನೇಶ್ವರಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಕಳೆದ ವರ್ಷ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭಾ ಸದಸ್ಯರಾದ ಶೃತಿ ವಸಂತ್ ಕುಮಾರ್ ಮತ್ತು ಗೀತಾ ರಾಜಕುಮಾರ್, ಶಿಮೂಲ್ ನಿರ್ದೇಶಕ ಕೆಂಚನಹಳ್ಳಿ ಎಸ್. ಕುಮಾರ್, ಜಮೀನ್ದಾರ್ ಪರಮೇಶ್ವರಪ್ಪ, ನಿವೃತ್ತ ಉಪನ್ಯಾಸಕ ನಿಂಗಪ್ಪ, ನಿವೃತ್ತ ಶಿಕ್ಷಕ ಜಿ. ಉಮೇಶ್ವರಪ್ಪ, ಸಿ.ಆರ್.ಪಿ ನಂದಿನಿ, ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಪೃಥ್ವಿರಾಜ್, ಎನ್.ಪಿ.ಎಸ್ ಅಧ್ಯಕ್ಷ ಎ. ರಂಗನಾಥ್, ಕುವೆಂಪು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಮುಸ್ವೀರ್ ಬಾಷಾ, ವಿದ್ಯಾಸಂಸ್ಥೆಯ ಸಲಹೆಗಾರರಾದ ಗೀತಾಬಾಯಿ ಸಿದ್ದೇಶ್ವರ, ಅಧ್ಯಕ್ಷ ಎಸ್. ವಿನಯ್, ಕಾರ್ಯದರ್ಶಿ ಎಸ್. ವಿವೇಕ್, ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು. ಶಿಕ್ಷಕಿ ಎಚ್.ಡಿ ಸುವರ್ಣ ಸ್ವಾಗತಿಸಿ, ಬಿ.ಎಂ ಲಿಂಗರಾಜ್ ನಿರೂಪಿಸಿ, ಕೆ.ಎಸ್ ಮಂಜುನಾಥ್ ವಂದಿಸಿದರು.

No comments:

Post a Comment