Tuesday, December 17, 2024

ಗುತ್ತಿಗೆದಾರ ಆರ್. ಶ್ರೀನಿಧಿ ನಿಧನ


ಆರ್. ಶ್ರೀನಿಧಿ 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಸಿದ್ಧಾರೂಢ ನಗರದ ನಿವಾಸಿ, ಗುತ್ತಿಗೆದಾರ ಆರ್. ಶ್ರೀನಿಧಿ(೩೪) ಮಂಗಳವಾರ ರಾತ್ರಿ ಅನಾರೋಗ್ಯದಿಂದ ನಿಧನ ಹೊಂದಿದರು. 
    ತಂದೆ, ತಾಯಿ, ಪತ್ನಿ, ಪುತ್ರಿ ಹಾಗು ಸಹೋದರ ನಗರಸಭೆ ಸದಸ್ಯ ಆರ್. ಶ್ರೇಯಸ್(ಚಿಟ್ಟೆ) ಇದ್ದಾರೆ. ಇವರ ಅಂತ್ಯಕ್ರಿಯೆ ಬುಧವಾರ ತಾಲೂಕಿನ ಬಾಬಳ್ಳಿಯಲ್ಲಿರುವ ಇವರ ತೋಟದಲ್ಲಿ ನೆರವೇರಿತು. 
    ಶ್ರೀನಿಧಿಯವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ವರ್ಗದವರು, ತಾಲೂಕು ಕುರುಬ ಸಮಾಜದ ಪ್ರಮುಖರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಹಾಗು ಗಣ್ಯರು ಸಂತಾಪ ಸೂಚಿಸಿದ್ದಾರೆ.  

No comments:

Post a Comment