Tuesday, December 17, 2024

ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್‌ಗೆ ರಾಜ್ಯ ಮಟ್ಟದ ದೇವಾಂಗರತ್ನ ಪ್ರಶಸ್ತಿ

ಶ್ರೀ ಗಾಯಿತ್ರಿ ಪೀಠ ಮಹಾಸಂಸ್ಥಾನ, ಹೇಮಕೋಟ, ಹಂಪಿ ಮತ್ತು ಕರ್ನಾಟಕ ರಾಜ್ಯ ದೇವಾಂಗ ಸಂಘ, ಬೆಂಗಳೂರು ವತಿಯಿಂದ ನೆಲಮಂಗಲದ ಕೆಂಪಲಿಂಗನಹಳ್ಳಿಯ ದೇವಾಂಗ ಮಠದಲ್ಲಿ ನಡೆದ ಶ್ರೀ ದೇವಲಮಹರ್ಷಿ ಜಯಂತೋತ್ಸವ ಸಮಾರಂಭದಲ್ಲಿ ಭದ್ರಾವತಿ ನಗರದ ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್‌ರವರಿಗೆ ರಾಜ್ಯಮಟ್ಟದ ದೇವಾಂಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
ಭದ್ರಾವತಿ : ಶ್ರೀ ಗಾಯಿತ್ರಿ ಪೀಠ ಮಹಾಸಂಸ್ಥಾನ, ಹೇಮಕೋಟ, ಹಂಪಿ ಮತ್ತು ಕರ್ನಾಟಕ ರಾಜ್ಯ ದೇವಾಂಗ ಸಂಘ, ಬೆಂಗಳೂರು ವತಿಯಿಂದ ನೆಲಮಂಗಲದ ಕೆಂಪಲಿಂಗನಹಳ್ಳಿಯ ದೇವಾಂಗ ಮಠದಲ್ಲಿ ನಡೆದ ಶ್ರೀ ದೇವಲಮಹರ್ಷಿ ಜಯಂತೋತ್ಸವ ಸಮಾರಂಭದಲ್ಲಿ ನಗರದ ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್‌ರವರಿಗೆ ರಾಜ್ಯಮಟ್ಟದ ದೇವಾಂಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
ನಾಗರಾಜ್‌ರವರ ನಾಲ್ಕು ದಶಕಗಳ ಯೋಗ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಶ್ರೀ ಜಗದ್ಗುರು ದಯಾನಂದಪುರಿ ಸ್ವಾಮೀಜಿ, ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷರಾದ ರವೀಂದ್ರ ಪಿ. ಕಲಬುರ್ಗಿ, ಶ್ರೀ ಗಾಯಿತ್ರಿ ಪೀಠದ ಅಧ್ಯಕ್ಷ ಪಿ. ಗಿರಿಯಪ್ಪ, ಕಾರ್ಯದರ್ಶಿ ಎಚ್.ಎಸ್ ತಿಮ್ಮಶೆಟ್ಟಿ,  ರಾಷ್ಟ್ರೀಯ ದೇವಾಂಗ ಸಂಘದ ಅಧ್ಯಕ್ಷರಾದ ಅರುಣ್ ಗಂಗಾಧರ ವರೋಡೆ, ಪ್ರಧಾನ ಕಾರ್ಯದರ್ಶಿ ರಾಜೇಶ್ ಹಾಗೂ ತುರುವೇಕೆರೆ ಮಾಜಿ ಶಾಸಕ ಎಂ.ಡಿ ಲಕ್ಷ್ಮೀನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

1 comment:

  1. ಸಾಧನೆಗೆ ಸಂದ ಪ್ರತಿಫಲ. ನಾಗರಾಜ್. ಅವರ ಶ್ರಮ, ಸಾಧನೆ ಭದ್ರಾವತಿಗೆ‌ ಹೆಮ್ಮೆಯ ವಿಚಾರ

    ReplyDelete