Thursday, January 2, 2025

ರಾಜ್ಯಾಧ್ಯಕ್ಷೆಯಾಗಿ ಅನುಸುಧಾ ಮೋಹನ್ ಪಳನಿ ನೇಮಕ

ಅನುಸುಧಾ ಮೋಹನ್ ಪಳನಿ  
    ಭದ್ರಾವತಿ : ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರುನಾಡು ರಾಜ್ಯ ವನ್ನಿಕುಲ(ವಹ್ನಿಕುಲ) ಕ್ಷತ್ರಿಯ ಮಹಾಸಭಾ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾಗಿ ನಗರಸಭೆ ಮಾಜಿ ಅಧ್ಯಕ್ಷ ಅನುಸುಧಾ ಮೋಹನ್ ಪಳನಿ ಅವರನ್ನು ನೇಮಕಗೊಳಿಸಲಾಗಿದೆ. 
    ಸಂಘಟನಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮುದಾಯದ ಸಬಲೀಕರಣ ಮತ್ತು ಏಳಿಗೆಗಾಗಿ ಹಾಗು ಸಂಘಟನೆಗಾಗಿ ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕ ತನದಿಂದ ಸೇವೆ ಸಲ್ಲಿಸುತ್ತೀರಿ ಎಂಬ ವಿಶ್ವಾಸದೊಂದಿಗೆ ಡಿ.೨೯ರಂದು ಮಹಿಳಾ ಘಟಕದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು  ಕರುನಾಡು ರಾಜ್ಯ ವನ್ನಿಕುಲ(ವಹ್ನಿಕುಲ) ಕ್ಷತ್ರಿಯ ಮಹಾಸಭಾ ರಾಜ್ಯಾಧ್ಯಕ್ಷ ಕೆ. ನಂದಕುಮಾರ್ ಗೌಂಡರ್ ಮತ್ತು ಪ್ರಧಾನ ಕಾರ್ಯದರ್ಶಿ ಪಿ. ರವಿಕುಮಾರ್ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ. 
    ಅನುಸುಧಾ ಮೋಹನ್ ಪಳನಿಯವರು ಪ್ರಸ್ತುತ ವಾರ್ಡ್ ನಂ.೧೩ರ ನಗರಸಭೆ ಸದಸ್ಯೆಯಾಗಿದ್ದು, ಪ್ರಸ್ತುತ ಕರುನಾಡು ರಾಜ್ಯ ವನ್ನಿಕುಲ(ವಹ್ನಿಕುಲ) ಕ್ಷತ್ರಿಯ ಮಹಾಸಭಾ ಮಹಿಳಾ ಘಟಕ ತಾಲೂಕು ಹಾಗು ಜಿಲ್ಲಾ ಮಟ್ಟದಲ್ಲಿ ಸಂಘಟಿಸಬೇಕಾಗಿದೆ. ನೂತನ ರಾಜ್ಯಾಧ್ಯಕ್ಷೆ ಅನುಸುಧಾ ಮೋಹನ್ ಪಳನಿಯವರನ್ನು ತಾಲೂಕು ವನ್ನಿಕುಲ(ವಹ್ನಿಕುಲ) ಗೌಂಡರ್ ಸಂಘದ ಅಧ್ಯಕ್ಷ ಮಣಿ ಎಎನ್‌ಎಸ್ ಸೇರಿದಂತೆ ನಗರದ ಗಣ್ಯರು ಅಭಿನಂದಿಸಿದ್ದಾರೆ. 

No comments:

Post a Comment