ಭದ್ರಾವತಿ ನ್ಯೂಟೌನ್ ಸರ್ ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ `ನಾವು ದ್ರಾವಿಡ ಕನ್ನಡಿಗರು' ಚಳುವಳಿಯ ವತಿಯಿಂದ ಜಗತ್ತಿನಲ್ಲಿಯೇ ಮೊಟ್ಟ ಮೊದಲ ಬಾರಿಗೆ `ವಿಶ್ವ ಕನ್ನಡ ದಿನ-ಜನವರಿ ೧೦' ಎಂದು ಘೋಷಿಸಲಾಯಿತು.
ಭದ್ರಾವತಿ : ನಗರದ ನ್ಯೂಟೌನ್ ಸರ್ ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ `ನಾವು ದ್ರಾವಿಡ ಕನ್ನಡಿಗರು' ಚಳುವಳಿಯ ವತಿಯಿಂದ ಜಗತ್ತಿನಲ್ಲಿಯೇ ಮೊಟ್ಟ ಮೊದಲ ಬಾರಿಗೆ `ವಿಶ್ವ ಕನ್ನಡ ದಿನ-ಜನವರಿ ೧೦' ಎಂದು ಘೋಷಿಸಲಾಯಿತು.
ಪ್ರಾದೇಶಿಕ ಭಾಷೆಯಾಗಿರುವ ಕನ್ನಡ ವಿಶ್ವ ಭಾಷೆಗಳ ಮಟ್ಟಕ್ಕೆ ಮೇಲ್ದರ್ಜೆಗೇರಿಸಲು ವಿಶ್ವ ಸಂಸ್ಥೆಯ ಮಾನ್ಯತೆ ಪಡೆಯಬೇಕಿದ್ದು, ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ವಿಶ್ವ ಸಂಸ್ಥೆಗೆ ಮನವಿ ಪತ್ರ ಬರೆಯಬೇಕೆಂದು ಈ ಕಾರ್ಯಕ್ರಮದ ಮೂಲಕ ಚಳುವಳಿಯ ಮುಂದಾಳು ಅಬಿ ಒಕ್ಕಲಿಗ ಒತ್ತಾಯಿಸಿದರು.
ಇದನ್ನು ಕಾಲೇಜಿನ ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ಎಲ್ಲಾ ವಿದ್ಯಾರ್ಥಿಗಳು ಅನುಮೋದಿಸಿದರು. ನಂತರ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ದ್ರಾವಿಡ ನುಡಿ ಕುಟುಂಬಕ್ಕೆ ಸೇರಿದ ಪ್ರಶ್ನೆಗಳನ್ನು ಕೇಳಲಾಯಿತು. ವಿದ್ಯಾರ್ಥಿಗಳು ಉತ್ತರ ನೀಡುವ ಮೂಲಕ ಬಹುಮಾನ ಪಡೆದುಕೊಂಡರು.
ಪ್ರಾಂಶುಪಾಲರಾದ ಶೈಲಜಾ ಹೊಸಳ್ಳೇರ ಮಾತನಾಡಿ, ಕನ್ನಡ ವಿಶ್ವ ಲಿಪಿಗಳ ರಾಣಿ ಎಂಬ ಬಿರುದು ಪಡೆದಿರುವ ಸಿರಿವಂತ ಭಾಷೆಯಾಗಿದ್ದು, ವಿಶ್ವ ಭಾಷೆಗಳ ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಮೂಲಕ ಈ ಭಾಷೆ ಕೀರ್ತಿ ಪತಾಕೆ ಮತ್ತಷ್ಟು ಹೆಚ್ಚಿಸಬೇಕಾಗಿದೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ರವಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಪರುಶಪ್ಪ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಶಫಿ ಮತ್ತು ದ್ರಾವಿಡ ಕನ್ನಡಿಗರು ಚಳುವಳಿಯ ಗಿರೀಶ್ ಎಂ ಸಿ ಹಳ್ಳಿ, ಮನು ವಿಶ್ವಕರ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment