Wednesday, February 5, 2025

ಫೆ.೭ರಂದು `ಬೆಂಗಳೂರು ಚಲೋ ಹೋರಾಟ' ಎನ್‌ಪಿಎಸ್ ನೌಕರರಿಂದ ಪತ್ರ ಚಳುವಳಿ

ಬೆಂಗಳೂರಿನಲ್ಲಿ ಫೆ.೭ರಂದು ನಡೆಯಲಿರುವ `ಬೆಂಗಳೂರು ಚಲೋ ಹೋರಾಟ'ದ ಅಂಗವಾಗಿ ಭದ್ರಾವತಿಯಲ್ಲಿ ಎನ್‌ಪಿಎಸ್ ತೊಲಗಿಸಿ ಓಪಿಎಸ್‌ಗಾಗಿ ಪತ್ರ ಚಳುವಳಿ ನಡೆಸಲಾಯಿತು. 
    ಭದ್ರಾವತಿ: ಬೆಂಗಳೂರಿನಲ್ಲಿ ಫೆ.೭ರಂದು ನಡೆಯಲಿರುವ `ಬೆಂಗಳೂರು ಚಲೋ ಹೋರಾಟ'ದ ಅಂಗವಾಗಿ ಎನ್‌ಪಿಎಸ್ ತೊಲಗಿಸಿ ಓಪಿಎಸ್‌ಗಾಗಿ ಪತ್ರ ಚಳುವಳಿ ನಡೆಸಲಾಯಿತು. 
    ನಗರದ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನದಲ್ಲಿ ಮಂಗಳವಾರ ಸಂಜೆ ಸಭೆ ನಡೆಸಿದ ಎನ್‌ಪಿಎಸ್ ನೌಕರರು ಪತ್ರ ಚಳುವಳಿ ಮೂಲಕ ತಾಲೂಕಿನ ಎಲ್ಲಾ ನೌಕರರು `ಬೆಂಗಳೂರು ಚಲೋ ಹೋರಾಟ'ದಲ್ಲಿ ಪಾಲ್ಗೊಳ್ಳುವಂತೆ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಕೋರಿದರು. 
    ಸಭೆಯಲ್ಲಿ ಪಾಲ್ಗೊಂಡ ನೌಕರರು ನಿವೃತ್ತಿ ನಂತರ ನೆಮ್ಮದಿ ಜೀವನಕ್ಕೆ ಎನ್‌ಪಿಎಸ್ ಯಾವುದೇ ರೀತಿ ನೆರವಾಗುವುದಿಲ್ಲ. ನೆಮ್ಮದಿ ಬದುಕಿಗೆ ಪಿಂಚಣಿ ಬೇಕೇ ಬೇಕು ಇಲ್ಲದಿದ್ದರೆ ನಮ್ಮ ಮುಂದಿನ ಬದುಕು ದುಸ್ತರವಾಗುತ್ತದೆ ಎಂದು ತಮ್ಮ ಅಳಲನ್ನು ತೋರ್ಪಡಿಸಿಕೊಂಡರು. 

No comments:

Post a Comment