Saturday, February 8, 2025

ಸಿದ್ದಾರ್ಥ ಅಂಧರ ಕೇಂದ್ರದ ಇಬ್ಬರು ವಿಕಲಚೇತನರಿಗೆ ಚಿನ್ನದ ಪದಕ


ಭದ್ರಾವತಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದ ಇಬ್ಬರು ವಿಕಲಚೇತನರು ೩೩ನೇ ರಾಜ್ಯ ಪ್ಯಾರ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಬಹುಮಾನದೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. 
    ಭದ್ರಾವತಿ : ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದ ಇಬ್ಬರು ವಿಕಲಚೇತನರು ೩೩ನೇ ರಾಜ್ಯ ಪ್ಯಾರ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಬಹುಮಾನದೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. 
    ಅಂಧ ವಿಕಲಚೇತನರಾದ ಎಂ.ಜಿ ಅಭಿಜಿತ್ ೧೦೦ ಮೀಟರ್ ಓಟದಲ್ಲಿ ಹಾಗು ಆರ್. ರಂಜನ್ ೨೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ. 
    ಈ ಇಬ್ಬರು ಸಾಧಕರನ್ನು ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ಆಡಳಿತಾಧಿಕಾರಿ ಶಾರದ ಶಿವಬಸಪ್ಪ ಸೇರಿದಂತೆ ಅಂಧರ ಕೇಂದ್ರದ ಆಡಳಿತ ಮಂಡಳಿ ಪ್ರಮುಖರು ಹಾಗು ಕ್ರೀಡಾಭಿಮಾನಿಗಳು ಮತ್ತು ನಗರದ ಗಣ್ಯರು ಅಭಿನಂದಿಸಿದ್ದಾರೆ. 

No comments:

Post a Comment