ಕೂಡ್ಲಿಗೆರೆ ಎಂ ಪರಮೇಶ್ವರಪ್ಪ
ಭದ್ರಾವತಿ: ತಾಲೂಕಿನ ಕೂಡ್ಲಿಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೂಡ್ಲಿಗೆರೆ ಎಂ ಪರಮೇಶ್ವರಪ್ಪ ಹಾಗೂ ಉಪಾಧ್ಯಕ್ಷರಾಗಿ ಅರಳಿಹಳ್ಳಿ ರಾಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸದಸ್ಯರಾದ ಜಿ.ಆರ್ ಪಂಚಾಕ್ಷರಿ, ಮಹೇಶ್ವರನಾಯ್ಕ, ರಾಜ್ ಕುಮಾರ್, ಜಿ.ಆರ್ ಸಿದ್ದೇಶಪ್ಪ, ಆರ್.ಎನ್ ರುದ್ರೇಶ್, ಗಿರಿಜಮ್ಮ, ವಿಜಯಲಕ್ಷ್ಮಿ ಬಾಯಿ, ವೆಂಕಟೇಶ್, ಆರ್. ಶಿವಣ್ಣ ಮತ್ತು ಟಿ.ತಿಪ್ಪೆಸ್ವಾಮಿ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು.
ಅರಳಿಹಳ್ಳಿ ರಾಜಣ್ಣ
ಸಂಘದ ಮಾಜಿ ಅಧ್ಯಕ್ಷ ಎನ್.ಎಚ್ ಮಹೇಶ್, ಪಿ. ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಿ. ಕೆ ಶಿವಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಣಿಶೇಖರ್, ಅರಳಿಹಳ್ಳಿ ಮಲ್ಲಿಕಾರ್ಜುನ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖರು, ಕೂಡ್ಲಿಗೆರೆ, ಸೀತಾರಾಮಪುರ, ಅತ್ತಿಗುಂದ, ಅರಳಿಹಳ್ಳಿ, ಕಲ್ಪನಹಳ್ಳಿ, ಬಸಲೀಕಟ್ಟೆ, ತಿಪ್ಲಾಪುರ, ಕೋಡಿಹಳ್ಳಿ ಗ್ರಾಮದ ಗ್ರಾಮಸ್ಥರು, ಹಿತೈಷಿಗಳು ಉಪಸ್ಥಿತರಿದ್ದರು.
No comments:
Post a Comment