ಗುರುವಾರ, ಮಾರ್ಚ್ 6, 2025

ಮಾ.೯ರಂದು `ಮಂಥನ' ೨ನೇ ಕಾರ್ಯಕ್ರಮ

    ಭದ್ರಾವತಿ: ನಗರದ `ಮಂಥನ'ವತಿಯಿಂದ ೨ನೇ ಕಾರ್ಯಕ್ರಮ ಮಾ. ೯ರ ಭಾನುವಾರ ಸಂಜೆ ೬ ಗಂಟೆಗೆ ಹಳೇನಗರದ ಶ್ರೀವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ  ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ನಡೆಯಲಿದೆ. 
    ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನಡೆಯಲಿದ್ದು, ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್. ಮಹೇಶ್ ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಸಂವಿಧಾನ ತಜ್ಞ ಹಾಗು ಅಂಕಣಕಾರ ಡಾ. ಸುಧಾಕರ ಹೊಸಹಳ್ಳಿ ಉಪನ್ಯಾಸಕರಾಗಿ ಆಗಮಿಸಿ `ಅಂಬೇಡ್ಕರ್ ಮತ್ತು ಇಸ್ಲಾಂ'  ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮಂಥನ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ