ಗುರುವಾರ, ಮಾರ್ಚ್ 6, 2025

ರಾಮ್ಕೋಸ್‌ಗೆ ೨ನೇ ಬಾರಿಗೆ ನಿರ್ದೇಶಕರಾಗಿ ಎಚ್.ಎಸ್ ಸಂಜೀವಕುಮಾರ್ ಆಯ್ಕೆ

ಭದ್ರಾವತಿ ನಗರದ ರೈತರ ಅಡಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ ನಿಯಮಿತ(ರಾಮ್ಕೋಸ್) ನಿರ್ದೇಶಕರಾಗಿ ಎಚ್.ಎಸ್ ಸಂಜೀವಕುಮಾರ್ ೨ನೇ ಬಾರಿಗೆ ಆಯ್ಕೆಯಾಗಿದ್ದಾರೆ. 
    ಭದ್ರಾವತಿ: ನಗರದ ರೈತರ ಅಡಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ ನಿಯಮಿತ(ರಾಮ್ಕೋಸ್) ನಿರ್ದೇಶಕರಾಗಿ ಎಚ್.ಎಸ್ ಸಂಜೀವಕುಮಾರ್ ೨ನೇ ಬಾರಿಗೆ ಆಯ್ಕೆಯಾಗಿದ್ದಾರೆ. 
    ಮುಂದಿನ ೫ ವರ್ಷಗಳ ಅವಧಿಗೆ ನಿರ್ದೇಶಕರ ಸ್ಥಾನಕ್ಕೆ ಜ.೨೫ರಂದು ಚುನಾವಣೆ ನಡೆದಿದ್ದು, ಫೆ.೩ರಂದು ಫಲಿತಾಂಶ ಹೊರಬಿದ್ದಿದೆ. ಸಂಜೀವಕುಮಾರ್‌ರವರ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸಿ ಪುನಃ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿರುವ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಶಾಂತರಾಜ್‌ರವರು ಫಲಿತಾಂಶ ಘೋಷಿಸಿದ್ದಾರೆ. 
    ಸಂಜೀವಕುಮಾರ್‌ರವರು ನಗರದ ಶಿವ ವಿವಿದೋದ್ದೇಶ ಸಹಕಾರ ಸಂಘದ ಚುನಾವಣೆಯಲ್ಲೂ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಪ್ರಸ್ತುತ ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಜೀವಕುಮಾರ್‌ರವರನ್ನು ನಗರದ ಗಣ್ಯರು, ವಿವಿಧ ಸಂಘ-ಸಂಸ್ಥೆಗಳು ಅಭಿನಂದಿಸಿವೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ